ಸಮಸ್ಯೆಗಳ ಆಗಾರ ಆನೇಮಡು ಗ್ರಾಮ ಮಳೆ ಬಂದರೆ ಸಾಕು ಶಾಲೆಯಲ್ಲೇಲ್ಲ ನೀರೇ ನೀರು

ವಿಜಯಪುರ ಜಿಲ್ಲೆಯ

ದೇವರ ಹಿಪ್ಪರಗಿ ತಾಲೂಕಿನ

ಆನೇಮಡು ಗ್ರಾಮದ ಸರ್ಕಾರಿ ಕನ್ನಡ ಶಾಲೆ ಕರ್ಮಕಾಂಡ ನೋಡಿ.

ಈ ಗ್ರಾಮದಲ್ಲಿ ಮಳೆ ಬಂದರೆ ಸಾಕು ಸರ್ಕಾರಿ ಶಾಲೆಯಲ್ಲಿ ನೀರೇ ನೀರು ಹೀಗೆ ಇದ್ದ ವೇಳೆಯಲ್ಲಿ ಪಾಲಕರು ಶಾಲೆಗೆ ಮಕ್ಕಳನ್ನ ಕಳಸುವುದಕ್ಕೆ ಭಯವಾಗಿದೆ ಎಂದು ತಿಳಿಸಿದರು ಮಕ್ಕಳ ಕೂಡ ಶಾಲೆಗೆ ಹೋಗುವುದಕ್ಕೆ ಭಯವಾಗಿದೆ ಎಂದು ತಿಳಿಸಿದರು.

 

ಆನೇಮಡು ಈ ಗ್ರಾಮಕ್ಕೆ ಯಾವ ಅಧಿಕಾರಿಗಳು ಬರುವುದಿಲ್ಲ ಬಸ್ಸಿನ ಸೌಕರ್ಯ ಇಲ್ಲ ಯಾರಿಗಾದರೂ ಅಘಾತ ಆದರೆ ಈ ಊರಿನಿಂದ ಆರು 6. ಕಿಲೋಮೀಟರ್ ನಡ್ಕೊಂಡೆ ಹೋಗಬೇಕು ಎಂದು ಗ್ರಾಮಸ್ಥರು ತಿಳಿಸಿದರು.

ಈ ಗ್ರಾಮದಲ್ಲಿ ಅಂಗನವಾಡಿ ಇದೆ ಆದರೆ ಶಿಕ್ಷಕಿ ಬರುವುದಿಲ್ಲ ಇಲ್ಲಿಯವರೆಗೂ ಯಾವ ಅಧಿಕಾರಿಗಳು ಕೂಡ ಈ ಗ್ರಾಮಕ್ಕೆ ಬಂದಿಲ್ಲ ನಮ್ಮೂರಿಗೆ ಬಸ್ಸಿನ ಸೌಕರ್ಯ ಮೊದಲೇ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮದ ಬಗ್ಗೆ ಹೆಚ್ಚಿಸ್ಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

 

ವರದಿ : ಮಹೇಬುಬ್ ಗುಂಟಕಲ್