ಹುಮನಾಬಾದ ಹಳೆ ತಹಸೀಲ್ದಾರ್ ಕಚೇರಿ ಎದುರು ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪಿಸಲು ಅನುಮತಿ ಕೋರಿ ಮನವಿ

ಹುಮನಾಬಾದ : ಪಟ್ಟಣದ ಹಳೆ ತಹಸೀಲ್ ಕಛೇರಿಯ ಎದುರುಗಡೆ ಸಂಗೋಳ್ಳಿ ರಾಯಣ್ಣನವರ ಫೊಟೊ ಹಾಗೂ ಝಂಡಾ ಹಚ್ಚಿದ್ದು, ಅದರಂತೆ ನಿಯಮಿತವಾಗಿ ಕಳೆದ ಸುಮಾರು ವರ್ಷಗಳಿಂದ ಸಂಗೊಳ್ಳಿ ರಾಯಣ್ಣನವರ ಫೋಟೋಗೆ ಪೂಜೆ ನೆರವೇರಿಸುತ್ತಿದ್ದೇವೆ. ಸಧ್ಯ ನಮಗೆ ಸದರಿ ಸ್ಥಳದಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಕಟ್ಟಿಸಬೇಕಾಗಿರುವದರಿಂದ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪಿಸಲು ಹುಮನಾಬಾದ ಮುಖ್ಯಾಧಿಕಾರಿಗಳಿಗೆ ರಾಯಣ್ಣ ಯುವಪಡೆ ವತಿಯಿಂದ ಮನವಿಪತ್ರ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸತೀಶ್ ರಾಂಪುರೆ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಡಾಕುಳಗಿ, ಕಾರ್ಯದರ್ಶಿ ಪಂಡಿತ್ ಬಾವಗಿ, ಮಲ್ಲಿಕಾರ್ಜುನ ಇಟಗೆನೋರ್, ಸಂಜೀವ್ ಒಡ್ಡನಕೇರಾ, ಉಮೇಶ್ ದಾಡಗಿ, ಸೈಯದ್ ಯಾಸಿನ್ ಅಲಿ ಉಪಸ್ಥಿತರಿದ್ದರು.