ಕೇವಲ ಸೀಮಿತ ಪತ್ರಕರ್ತರಿಗೆ ಆಹ್ವಾನ ಉಳಿದವರಿಗೆ ತಹಶೀಲ್ದಾರ್ ಕಟ್ಟಿಮನಿ ಕಡೆಗಣನೆ ಆರೋಪ

ಹುಕ್ಕೇರಿ : ಸ್ವಾತಂತ್ರ್ಯೋತ್ಸವದ ಅಂಗವಾಗಿ ತಹಶೀಲ್ದಾರ್ ಕಚೇರಿಯಿಂದ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಕೆಲ ದಿನಪತ್ರಿಕೆ ವರದಿಗಾರರಿಗೆ ಆಹ್ವಾನ ನೀಡದೆ ಕಡೆಗಣಿಸಿರುವುದು ಪತ್ರಿಕಾ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ತಹಶೀಲ್ದಾರ್ ಕಟ್ಟಿಮನಿ ಅವರ ಕಚೇರಿಯಲ್ಲಿ ಆಯೋಜಿಸಲಾದ ಸತ್ಯನಾರಾಯಣ ಪೂಜೆಗೂ ಸಹ ದಿನಪತ್ರಿಕೆ ವರದಿಗಾರರಿಗೆ ಆಹ್ವಾನ ನೀಡದೇ ಇರುವುದು ಪತ್ರಕರ್ತರಿಗೆ ಅವಮಾನಿಸಿದಂತೆ ಕಂಡುಬಂದಿದೆ.

ಆದರೆ ಕೆಲವೇ ಸೀಮಿತ ಪತ್ರಕರ್ತರಿಗೆ ಮಾತ್ರ ಆಹ್ವಾನ ನೀಡಿರುವುದು ಸ್ಪಷ್ಟವಾಗಿದ್ದು, ಉಳಿದ ದಿನಪತ್ರಿಕೆ ವರದಿಗಾರರನ್ನು ತಾರತಮ್ಯ ಮಾಡುತ್ತಿದ್ದಾರೆ

ಈ ನಡೆಗೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ವರದಿಗಾರರು, “ಪತ್ರಕರ್ತರು ಜನಸಾಮಾನ್ಯರ ಧ್ವನಿ. ಅವರನ್ನೇ ಕಡೆಗಣಿಸುವುದು ಸೂಕ್ತವಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮುಂದೆ ಆದರೂ ತಮ್ಮ ಕಚೇರಿಯ ಎಲ್ಲಿ ನಡೆಯುವ ಸಭೆ ಸಮಾರಂಭಗಳಿಗೆ ಪತ್ರಕರ್ತರನ್ನು ಆಹ್ವಾನಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕ ಅಧ್ಯಕ್ಷರಾದ. ಸುನೀಲ್ ಲಾಳಗೆ ಹಾಗೂ ಎಲ್ಲ ಪತ್ರಕರ್ತರಿಂದ ಮನವಿ ಮಾಡಲಾಗಿದೆ.

ವರದಿ : ಸದಾನಂದ ಎಂ

error: Content is protected !!