ಹುಕ್ಕೇರಿ ರೈತರು ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ಪಡೆದುಕೊಳ್ಳಿ ಶಾಸಕ ನಿಖಿಲ್ ಕತ್ತಿ

ಹುಕ್ಕೇರಿ.ಕೃಷಿ ಇಲಾಖೆ ಹುಕ್ಕೇರಿ ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ರೈತರಿಗೆ ಚಿತ್ತನೆ ಬೀಜ ವಿತರಣೆ.
ಹಾಗೂ
ಕೃಷಿ ಇಲಾಖೆ ಹುಕ್ಕೇರಿ ಕಚೇರಿಯ ಹೊಸದಾಗಿ ನಿರ್ಮಸಿರುವ ಸಭಾಂಗಣ ಕಟ್ಟಡದ ಉದ್ಘಾಟನೆ. ಸಮಾರಂಭದಲ್ಲಿ
ಹುಕ್ಕೇರಿ ಮತ ಕ್ಷೇತ್ರದ ಶಾಸಕರಾದ ಶ್ರೀ ಸನ್ಮಾನ್ಯ ಶ್ರೀ ನಿಖಿಲ್ ಕತ್ತಿ ರೈತರಿಗೆ ಬಿತ್ತನೆ ಬೀಜಗಳು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ವರ್ಷ ಸೋಯಾಬಿನ್ 7500 ಕ್ವಿಂಟಲ್ ಈ ಬಾರಿ 500 ಕ್ವಿಂಟಲ್ ಹೆಚ್ಚಿನ ಪ್ರಮಾಣದಲ್ಲಿದೆ ಹಾಗೂ ಗೋವಿನ ಜೋಳ 18.4 ಕ್ವಿಂಟಲ್ ಪಿಕೆಪಿಎಸ್ 39 ಹಾಗೂ 03 ರೈತ ಸಂಪರ್ಕ ಕೇಂದ್ರಗಳು ಒಟ್ಟು 42 ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ ರೈತರಿಗೆ ರಿಯಾಯಿತಿಯ ಮೂಲಕ ಬಿತ್ತನೆ ಬೀಜ ನೀಡಲಾಗುತ್ತೆ. ತಾವೆಲ್ಲರೂ ತೆಗೆದುಕೊಳ್ಳಬೇಕೆಂದು ಶಾಸಕ ನಿಖಿಲ್ ಕತ್ತಿ ಹೇಳಿದರು
ಇದೇ ಸಂದರ್ಭದಲ್ಲಿ ಬಿ ಆರ್ ನಾಯ್ಕರ್ ಕೃಷಿ ಸಹಾಯಕ ನಿರ್ದೇಶಕರು ಹುಕ್ಕೇರಿ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಸ್ಥಳೀಯ ಶಾಸಕರು ಚಾಲನೆ ನೀಡಿದರು ರೈತರು ಮಳೆಯ ಪ್ರಮಾಣ ಶೇಕಡಾ 25ರಷ್ಟು ಮಳೆಯ ಪ್ರಮಾಣ ಕಡಿಮೆ ಇದೆ ಅದಕ್ಕಾಗಿ ರೈತರು ಬಿತ್ತನೆಗಾಗಿ ಅವಸರ ಬೇಡ ಸಾಕಷ್ಟು ಮಳೆ ಆಗಲಿ ತೇವಾಂಶ ನೋಡಿ ಸೋಯಾಬೀನ್ ಜುಲೈ 15 ರವರೆಗೆ ಬಿತ್ತಲಿಕ್ಕೆ ಅವಕಾಶ ಇದೆ ಸಮೃದ್ಧಿಯಾಗಿ ಮಳೆಯಾಗಲಿ ರೈತರು ಬಿತ್ತನೆ ಬೀಜ ತೆಗೆದುಕೊಳ್ಳಬೇಕು ಬರುವಾಗ ಎಫ್ ಐ ಡಿ ನಂಬರ್ ಇಲ್ಲವಾದರೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು ನಮ್ಮ 42 ಕೇಂದ್ರಗಳಲ್ಲಿ ಬಿತ್ತನೆ ಬೀಜ ಶೇಖರಣೆ ಮಾಡಿರುತ್ತೇವೆ ಎಂದರು
ಕೃಷಿ ಇಲಾಖೆ ಬೆಳಗಾವಿ 2025 26 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಕೃಷಿ ಇಲಾಖೆಯಹುಕ್ಕೇರಿ ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪ್ರಯುಕ್ತ ಕೃಷಿ ಇಲಾಖೆ ಹುಕ್ಕೇರಿ ಶ್ರೀ ಆರ್ ಬಿ ನಾಯ್ಕರ್ ಮತ್ತು ತಂಡ ಅಧಿಕಾರಿ ಸಿಬ್ಬಂದಿ ವರ್ಗದವರು ಹುಕ್ಕೇರಿ ಇವರಿಗೆ ಈ ಅಭಿನಂದನ ಪತ್ರ ನೀಡಿ ಗೌರವಿಸಿದ್ದಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಾದ ಶ್ರೀ ನಿಖಿಲ್ ಕತ್ತಿ ಹಾಗೂ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಹಾಗೂ ರೈತ ಬಾಂಧವರು ಹಾಗೂ ರೈತ ಮುಖಂಡರು ಸ್ಥಳೀಯ ಜನರಿಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ ಅಂತ ಕೃಷಿ ಸಹಾಯಕ ನಿರ್ದೇಶಕರಾದ ಶ್ರೀ ಆರ್ ಬಿ ನಾಯ್ಕರ್ ಹೇಳಿದರು
ಈ ಸಂದರ್ಭದಲ್ಲಿ ಹುಕ್ಕೇರಿ ಶಾಸಕರಾದ ಸನ್ಮಾನ್ಯ ಶ್ರೀ ನಿಖಿಲ್ ಕತ್ತಿ
ಶ್ರೀ ಆರ್ ಬಿ ನಾಯ್ಕರ್ ಕೃಷಿ ಸಹಾಯಕ ನಿರ್ದೇಶಕರು ಹುಕ್ಕೇರಿ
ಸತ್ಯಪ್ಪ ನಾಯಕ್ ಗುರುರಾಜ್ ಕುಲಕರ್ಣಿ ರಾಜು ಮುನ್ನೋಳಿ ಚೆನ್ನಪ್ಪ ಗಜಬರ್ ಗಿರೀಶ್ ಕುಲಕರ್ಣಿ ಶಿವಾನಂದ್ ಹಾಗೂ ರೈತ ಬಾಂಧವರು ಮುಖಂಡರು ಗಣ್ಯ ಮಾನ್ಯರು ಸ್ಥಳೀಯ ಜನರು ಹಾಗೂ ಕೃಷಿ ಇಲಾಖೆ ಹುಕ್ಕೇರಿ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ : ಸದಾನಂದ ಎಮ್

error: Content is protected !!