ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಿರುವ ಮಣಿಕಂಠ ಗಾದಾ ಅವರಿಗೆ ಸನ್ಮಾನ

ಹುಮ್ನಾಬಾದ: ಬೀದರ್ ಜಿಲ್ಲೆಯ ಹುಮ್ನಾಬಾದ ಪಟ್ಟಣದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಮೇಶ್ ಎಂ ಗಾದಾ ಅವರ ಸುಪುತ್ರರಾದ ಮಣಿಕಂಠ ಆರ್ ಗಾದಾ ಅವರು ತಮ್ಮ ಉನ್ನತ ಶಿಕ್ಷಣಕಾಗಿ ಇಂಗ್ಲೆಂಡಿ ಅಂದರೆ ವಿದೇಶದಲ್ಲಿ ಪಡೆಯಲು ಹೋಗುತ್ತಿದ್ದಾರೆ ,ಅದಕ್ಕಾಗಿ ರಾಮಚಂದ್ರ ವೀರಪ್ಪ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅವರನ್ನು ಸನ್ಮಾನಿಸಿ ಶುಭ ಕೋರಿದರು, ಇದೇ ಸಂದರ್ಭದಲ್ಲಿ ರಾಮ ಮತ್ತು ರಾಜ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ಮುಖ್ಯಸ್ಥರು ಆದ ನಾಗಶೆಟ್ಟಿ ಶೇರಿಕರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸುಬೇದಾರ್, ರಾಮಚಂದ್ರ ವೀರಪ್ಪ ಪದವಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಿರೀಶ್ ಕೆ ಕಟ್ಟೋಳಿ, ಕಾಶಿಬಾಯಿ ಪಾಟೀಲ, ಭೀಮರಾವ್ ಜೆ ಕುಲಕರ್ಣಿ, ಮಹದೇವ ರೆಡ್ಡಿ ಬಿ ವಾಡಿ, ಅನಿತಾ ಪಾಟೀಲ, ರಾಚಯ್ಯ ಹಿರೇಮಠ, ಭಾಗ್ಯಲಕ್ಷ್ಮಿ ರೆಡ್ಡಿ, ಕಾವೇರಿ ಪಾಟೀಲ್ ,ಉಮಾಶ್ರೀ ಸಿದ್ದಣ್ಣ, ಧನಶ್ರೀ ಮಂಡಾ, ಸೂರ್ಯಕಾಂತ ಮುಂತಾದವರು ಉಪನ್ಯಾಸಕ ಉಪಸ್ಥಿತರಿದ್ದರು