ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗಾಗಿ ಬೃಹತ್ ಪ್ರತಿಭಟನೆ

ಹುಕ್ಕೇರಿ : ಹುಕ್ಕೇರಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಹುಕ್ಕೇರಿ ವತಿಯಿಂದ ಬಹೃತ ಹೋರಾಟ ಪ್ರತಿಭಟನೆ

 

ಒಳಮೀಸಲಾತಿ ಜಾರಿಮಾಡುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಇಂದು ಹುಕ್ಕೇರಿಯ ಪ್ರವಾಸಿ ಮಂದಿರದಿಂದ ತಶೀಲ್ದಾರ ಕಛೇರಿವರಿಗೆ ಪ್ರತಿಭಟನೆ ಮತ್ತು ಹೋರಾಟದಲ್ಲಿ ಸಾವಿರಾರು ಜನರು ಆಗಮಿಸಿದ್ದು ಹುಕ್ಕೇರಿ ತಾಲೂಕಿನ ಎಲ್ಲ ಪರಿಶಿಷ್ಟ ಜಾತಿಗಳ ಸಮುದಾಯ ಒಕ್ಕೂಟದಿಂದ ಬಹೃತ ಹೋರಾಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿದು.

 

ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ತೀರ್ಮಾನ ಮಾಡಿದರು ಇಂದಿನ ರಾಜ್ಯ ಸರಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಆದಷ್ಟು ಬೇಗ ಸಚಿವ ಸಂಪುಟ ಸಭೆಯನ್ನು ಕರೆದು ಒಳ ಮೀಸಲಾತಿಯನ್ನು ಜಾರಿಗೆಯನ್ನು ಮಾಡಿ ಇಲ್ಲವಾದರೆ ತಾವು ಸರಿಯಾಗಿ ತೀರ್ಮಾನ ತೆಗೆದುಕೊಳ್ಳದಿದ್ದರೆ ಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವದು ಮತ್ತು ತಮ್ಮ ಪಕ್ಷವು ಘೋಷಿಸಿದ ಪಂಚ ಗ್ಯಾರಂಟಿಗಳಿಗೆ ನಮ್ಮ ಸಮುದಾಯದ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ಬಳಕೆ ಮಾಡಿಕೊಂಡಿದ್ದೀರಿ ಆದರು ಕೂಡ ಬಹಳ ಅತ್ಯಂತ ಸಹನೆಯಿದ್ದವೆ ತಾವು ಅರ್ಥಮಾಡಿಕೊಳ್ಳಿ.

 

ಒಳ ಮೀಸಲಾತಿ ನಮ್ಮ ಹಕ್ಕು ಒಳ ಮೀಸಲಾತಿ ಆದಷ್ಟು ಬೇಗ ಜಾರಿಗೆ ಮಾಡಿಕೊಡಿ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಮಾಧ್ಯಮದೊವರ ಮುಂದೆ ಹೇಳಲಾಯಿತು.

 

ತಾಲೂಕ ದಂಡಾಧಿಕಾರಿಗಳಾದ ಶ್ರೀಮತಿ ಮಂಜುಳಾ ನಾಯಕ, ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

 

ಈ ಸಂದರ್ಭದಲ್ಲಿ ಕರಿಯಪ್ಪ ಗುಡ್ಡೆನವರ, ಬಾಹುಸಾಬ್ ಪಾಂಡ್ರೆ,ವಿಠ್ಠಲ ಮಾದರ್

ಶಂಕರ್ ಕಟ್ಟಿಮಣಿ

ಸತೀಶ್ ಮಾದರ್

ಶಶಿಕಾಂತ್ ಹೊನ್ನಳಿ

ಶಂಕರ್ ಗಂಟಿ

ಮಹೇಶ್ ಹತ್ತಿಹೋಳಿ

ಬಸವರಾಜ್ ದೊಡಮನಿ

ಬಾಳು ಪೂಜೇರಿ

ಬಂಡ್ಯಾಪ್ಪ ಮಾದರ್

ಮಾರುತಿ ಬೆಳವಿ

ಮುತ್ತು ಮಾದರ್

ಅರುಣ್ ಮಾದರ್

ಕುಮಾರ್ ಕಡಹಟ್ಟಿ

ಈ ಮಾನ್ವೇಲ್

ಪ್ರದೀಪ್ ಮಾದಿಗ್

, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಸದ್ಯಸರು ಹಾಗೂ ವಿವಿಧ ಹಳ್ಳಿ ಹಳ್ಳಿಯಿಂದ ಸಾವಿರಾರ ಜನರು ಬಂದು ಈ ಬ್ರಹ್ಮತ ಹೋರಾಟದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು..

 

ವರದಿ : ಸದಾನಂದ