ಹುಕ್ಕೇರಿ ತಾಲೂಕು ಆಡಳಿತ ಹಾಗೂ ಹಣಬರ್ ಯಾದವ್ ಸಮುದಾಯದಿಂದ ಕೃಷ್ಣ ಜನ್ಮಾಷ್ಠಮಿ

ಹುಕ್ಕೇರಿ :  ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹಣಬರ್ ಯಾದವ್ ಸಮುದಾಯದವರು ಹಾಗೂ ತಾಲೂಕ ಆಡಳಿತ ಸಂಯುಕ್ತ ಆಶ್ರಯದಲ್ಲಿ ಜರುಗಿತು ತಹಶೀಲ್ದಾರ್ ಕಾರ್ಯಾಲಯ ತಾಲೂಕ ಆಡಳಿತ ಸೌಧದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಟಿ ಆರ್ ಮಲ್ಲಾಡದ ಹಾಗೂ ಶ್ರೀಮತಿ ಅನಿತಾ ಕೇಶಾಗೋಳ ಪ್ರವಾಹ ಮತ್ತು ಅತಿವೃಷ್ಟಿ ಅನಾವೃಷ್ಟಿ ಶಿರಸ್ತೆದಾರ್ ಇವರು ನೆರವೇರಿಸಿದರು ಈ ಸಂದರ್ಭದಲ್ಲಿ ಶ್ರೀಮತಿ ಅನಿತಾ ಕೇಶಾಗೋಳ ಶ್ರೀ ಕೃಷ್ಣ ಪರಮಾತ್ಮನ ತತ್ವ ಆದರ್ಶವನ್ನು ಪಾಲಿಸಬೇಕೆಂದು ಹೇಳಿದರು ಹಾಗೂ ಪ್ರೊಫೆಸರ್ ಅನಿಲ್ ಕಾಂಬ್ಳೆ ಸಮಾಜಶಾಸ್ತ್ರದ ಮುಖ್ಯಸ್ಥರು ಹಣಬರ ಸಮಾಜದ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಹಾಗೂ ಹಣಬರ ಸಮಾಜದ ಜನರು ಅತ್ಯಂತ ಧೈರ್ಯಶಾಲಿಗಳು ಹಾಗೂ ಯಾವುದೇ ಸಂದರ್ಭದಲ್ಲಿ ಯಾವುದೇ ಕಷ್ಟದಲ್ಲಿ ಸಮಾಜ ಮುಖ್ಯವಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು ಮತ್ತು ಹಣಬರ ಸಮಾಜದ ಆರ್ಥಿಕ ಸ್ಥಿತಿಗತಿ ಸಮಾಜ ಶಾಸ್ತ್ರದ ಅಧ್ಯಯನ ಮಾಡಿದ ವಿದ್ಯಾರ್ಥಿಯಾದ ಪೂಜಾ ಗಿರಿಮಲ್ಲೆನವರು ಮಾತನಾಡಿ ಹನಬರ ಸಮಾಜದ ಆರಾಧ್ಯ ದೈವ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಅತಿ ವಿಪ್ರಂಜನೆಯಿಂದ ಆಚರಿಸುತ್ತಾರೆ ಇವರ ಕಾಯಕವಾದ ಹಾಲು ಉತ್ಪಾದನೆ ಹಾಗೂ ಜಮೀನಿನಲ್ಲಿ ತೊಡಗಿರುತ್ತಾರೆ ಈಗಿನ ಯುವಕ ಯುವತಿಯರು ಶಿಕ್ಷಣಕ್ಕೆ ಹಚ್ಚುವತ್ತು ನೀಡಬೇಕೆಂದು ಹೇಳಿದರು ಇದೇ ಸಂದರ್ಭದಲ್ಲಿ ಹಣಗರ್ ಸಮಾಜದ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಶಾಲು ಮಾಲೆ ಹಾಕಿ ಗೌರವ ಸಮರ್ಪಣೆ ನೆರವೇರಿಸಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ. ಪ್ರವಾಹ ಮತ್ತು ಅತಿವೃಷ್ಟಿ ಅನಾವೃಷ್ಟಿ, ಶಿರಸ್ತೆದಾರ್ ರಾದ ಶ್ರೀಮತಿ ಅನಿತಾ ಕೆಸಾಗೋಳ್.ಕೆಂಪಣ್ಣಾ ನಾಯಕ. ಶಿವಾನಂದ ಪಾಟೀಲ. ಸಾಗರ ಪಾಟೀಲ. ಶಿವಲಿಂಗ ಮುತ್ನಾಳಿ.ಬಸವರಾಜ ಗೋಣೆ.ಸಂತೋಷ ಪಾಟೀಲ.ಬಸವರಾಜ ರಾಮನಕಟ್ಟಿ.ಸಂತೋಷ ಕಾಂಗಲೆ. ಹಣಬರ್ ಸಮಾಜದ ಗಣ್ಯ ವ್ಯಕ್ತಿಗಳು ಮುಖಂಡರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಕ್ಕಳು ಉಪಸ್ಥಿತರಿದ್ದರು.

 

ವರದಿ : ಸದಾನಂದ ಎಂ