ಸೇ 6ಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಚಿಂಚೋಳಿ ತಾಲೂಕು ಪದಾಧಿಕಾರಿಗಳ ಪದಗ್ರಹಣ – ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ್

ರಾಜ್ಯ ಮಾಹಿತಿ ಹತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಚಿಂಚೋಳಿ ತಾಲೂಕಿನ ನೂತನ ಅಧ್ಯಕ್ಷರಾದ ಅನೀಲ ಬಿರಾದಾರ ಆಗಿದ್ದು, ನೂತನ ತಾಲೂಕು

ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಲಿದ್ದು, ದಿನಾಂಕ 06-09-2024 ರಂದು ಬಂಜಾರಾ

ಭವನದಲ್ಲಿ ಸಮಯ ಮುಂಜಾನೆ 11-00 ಗಂಟೆಗೆ ನಡೆಯಲಿದೆ,

ಈ ಕಾರ್ಯಕ್ರಮದ ಮುಂಚೆ ಬೆಳಗ್ಗೆ 10-30 ರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ತಾಲೂಕು ಮಟ್ಟದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ

ನಡೆಯಲಿದ್ದು, ಒಂದು ಶಾಲೆಯ ಎರಡು ತಂಡಗಳು ಭಾಗವಹಿಸಬಹುದು.

ಕಾರ್ಯಕ್ರಮದ ದಿನದಂದು ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನದ

ಜೊತೆಗೆ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರಗಳು ಉಳಿದ ಶಾಲೆಯ ಮಕ್ಕಳಿಗೆ ಸಮಧಾನಕರ

ಬಹುಮಾನವಾಗಿ ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರಗಳು ಕೊಡಲಾಗುವುದು.

ಭಾಗವಹಿಸುವ ಸರಕಾರಿ ಮತ್ತು ಖಾಸಗಿ ಶಾಲೆಯ ಮಕ್ಕಳು ಆಸಕ್ತಿಯಿರುವವರು ಈ ದೂರವಾಣಿ ಸಂಖೆ 9900158765 ಮತ್ತು

7829808095 ಸಂಪರ್ಕಿಸಿ ನೊಂದಣಿ ಮಾಡಿಕೊಳ್ಳಬೇಕು. ಭಾಗವಹಿಸುವ ಶಾಲೆ ಮಕ್ಕಳು ಕಾರ್ಯಕ್ರಮ ದಿನದಂದು 9 ಗಂಟೆ ಒಳಗಾಗಿ ಬಂಜಾರ ಭವನದಲ್ಲಿ ಇರತಕ್ಕದ್ದು ಎಂದು

ರಾಜೇಂದ್ರ ಪ್ರಸಾದ ಎಸ್.ಕೆ.

ಜಿಲ್ಲಾ ಅಧ್ಯಕ್ಷರು,

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ

ಕಾರ್ಯಕರ್ತರ ವೇದಿಕೆ (ರಿ)

ಅನೀಲ ಬಿರಾದಾರ

ತಾಲೂಕು ಅಧ್ಯಕ್ಷರು

ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ

ಕಾರ್ಯಕರ್ತರ ವೇದಿಕೆ (ರಿ) ಮಾಹಿತಿ ನೀಡಿದ್ದಾರೆ.