ಕತ್ತಿ ವಿರುದ್ದ ಬೃಹತ ಪ್ರತಿಭಟನೆಗೆ ಕರೆ
ವಾಲ್ಮೀಕಿ ಸಮಾಜದ ವಿರುದ್ಧ ಮಾಜಿ ಸಂಸದ ರಮೇಶ ಕತ್ತಿ ಅಶ್ಲೀಲ ಪದ ಬಳಕೆ ಪ್ರಕರಣ.
ಬೆಳಗಾವಿಯಲ್ಲಿ ರಮೇಶ್ ಕತ್ತಿ ವಿರುದ್ಧ ಎಫ್ಐಆರ್ ದಾಖಲು.
ರಮೇಶ ಕತ್ತಿ ವಿರುದ್ಧ ದಾಖಲಾಯ್ತು ಜಾತಿ ನಿಂದನೆ( ಅಟ್ರಾಸಿಟಿ) ಕೇಸ್!
ಬೆಳಗಾವಿ ಕ್ಯಾಂಪ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.
ವಾಲ್ಮೀಕಿ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಡಿ ಕೇಸ್.
ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಬಗ್ಗೆ ರಮೇಶ ಕತ್ತಿ ಹಗುರ ಮಾತು.
ವಾಲ್ಮೀಕಿ ಸಮಾಜದ ಮುಖಂಡ ರಾಜಶೇಖರ ತಳವಾರ ನೇತೃತ್ವದಲ್ಲಿ ಎಫ್ಐಆರ್.
ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ಕೊಟ್ಟ ವಾಲ್ಮೀಕಿ ಸಮಾಜದ ನಾಯಕರು.
ಕತ್ತಿ ಹೇಳಿಕೆ ವಿರುದ್ಧ ಬೆಳಗಾವಿಯಲ್ಲಿ ವಾಲ್ಮೀಕಿ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆಗೆ ನಿರ್ಧಾರ.
ವರದಿ : ಸದಾನಂದ ಎಂ