ಅಕ್ಕೋಳ : ನಿಪ್ಪಾಣಿ ಮತಕ್ಷೇತ್ರದ ಅಕ್ಕೋಳ ಗ್ರಾಮದಲ್ಲಿ ಶ್ರೀ ರೇಣುಕಾ ಮಂದಿರಕ್ಕೆ ಭೇಟಿ ನೀಡಿ,ನಾನು ಸಚಿವೆಯಾದ ಸಂದರ್ಭದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಂಜೂರಾಗಿದ್ದ 15 ಲಕ್ಷ ರೂ ಮೊತ್ತದಲ್ಲಿ ಮಂದಿರ ಜೀರ್ಣೋದ್ದಾರ ಕಾಮಗಾರಿ ವಾಸ್ತುಶಾಂತಿ,ಮೂರ್ತಿಪ್ರಾಣ ಪ್ರತಿಷ್ಠಾಪನೆ,ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ನಿಪ್ಪಾಣಿ ಸಮಾಧಿ ಮಠದ ಪ.ಪೂಜ್ಯ ಶ್ರೀ ಪ್ರಾಣಲಿಂಗ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಸತ್ಕಾರ ಸ್ವೀಕರಿಸಿ, ಮಾತನಾಡಿದರು.ಇದಕ್ಕೂ ಮೊದಲು ದೇವರ ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಸುಹಾಸ ಗುಗೆ, ಸಂದೀಪ ಸದಾವರ್ತೆ, ಸಚಿನ ಜಾಧವ, ವಿಕಾಸ ಸಂಕಪಾಳ, ಅನಿಕೇತ ಕುಲಕರ್ಣಿ, ಸಂಜು ಪಿಸಾಳ, ಶೈಲೇಂದ್ರ ಕರಡೆ, ಸುಷ್ಮಾ ಪಿಸಾಳ, ರಮೇಶ ಮೇತ್ರಿ, ಅಪ್ಪಾ ಸೊಲೂಕುರೆ, ಓಂಕಾರ ಬರ್ಮಲ ದೀಪಕ ಜಾಧವ, ದೇವಸ್ಥಾನ ಕಮೀಟಿ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರ.
ವರದಿ/ಸದಾನಂದ ಎಚ್