ವೀರಪ್ಪಾ ಭುತಾಳೆಗೆ ರಾಜ್ಯಮಟ್ಟದ ಕರುನಾಡು ಪ್ರಶಸ್ತಿ

ಹುಮನಾಬಾದ : ತಾಲೂಕಿನ ಧುಮ್ಮನಸೂರ ಗ್ರಾಮ ಪಂಚಾಯತನ ಅಧ್ಯಕ್ಷ ವೀರಪ್ಪಾ ಭುತಾಳೆ ಅವರಿಗೆ ಗ್ರಾಮ ಪಂಚಾಯಿತಿನ ವ್ಯಾಪ್ತಿಯಲ್ಲಿ ಸರಿಸುಮಾರಾಗಿ ಹಲವಾರು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಅಲ್ಲದೆ ನೋಡಲು ಸುಂದರ ಮತ್ತು ಮಾದರಿ ಗ್ರಾಮವನ್ನಾಗಿ ಮಾಡಲು ಬಹಳಷ್ಟು ಶ್ರಮವನ್ನು ಕೊಟ್ಟಿದ್ದಾರೆ ಎನ್ನುವ ಕುರಿತು jk ಕನ್ನಡ news ಬಿತ್ತರಿಸಿದ ಸುದ್ದಿಯನ್ನು ಆಧಾರಿಸಿ ಪತ್ರಕರ್ತರ ಸಂಘ ಈ ಬಾರಿ ರಾಜ್ಯಮಟ್ಟದ ಕರುನಾಡು ಪ್ರಶಸ್ತಿಯನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರಿಂದ ಪತ್ರಕರ್ತರ ಮೂರನೇ ರಾಜ್ಯ ಸಮ್ಮೇಳನ ಶುಭ ಸಂದರ್ಭದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಕರುನಾಡು ಸಾಧಕ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು,

ಬೀದರ್ ಜಿಲ್ಲೆಯ ಹುಮ್ನಾಬಾದ ತಾಲೂಕಿನ ಧೂಮ್ಮನಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ವೀರಪ್ಪಾ ಎಸ್. ಭುತಾಳೆ ಇವರು ಮಾಡಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅತ್ಯುತ್ತಮ ಸೇವೆಯನ್ನು ಗುರುತಿಸಿ ಇವರಿಗೆ ಕರುನಾಡು ಸಾಧಕ ಸೇವಾ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

ಪತ್ರಕರ್ತರಾದ ಮಲ್ಲಿಕಾರ್ಜುನ ನಿಂಬುರೆ, ರಾಮಶೇಟ್ಟಿ ಮರಖಲ್ ಉಪಸ್ಥಿತರಿದ್ದರು.

error: Content is protected !!