ಸುಭಾಷ ರಾಠೋಡ ಅವರನ್ನು ಎಂಎಲ್ಸಿ ಮಾಡಲು ಶರಣು ಪಾಟೀಲ ಮೋತಕಪಳ್ಳಿ ಒತ್ತಾಯ

ತನ್ನ ವಿಧ್ಯಾರ್ಥಿ ಜೀವನದಿಂದಲೇ ಹೋರಾಟ ಮಾಡುತ್ತಾ ಬಂದ ನಮ್ಮ ಭಾಗದ ಬಂಜಾರಾ ಸಮುದಾಯದ ವಿದ್ಯಾವಂತ, ಸ್ವಚ್ಚ ವ್ಯಕ್ತಿತ್ವ, ಬಸವಾದಿ ಶರಣರ ನಡೆ ನುಡಿಯನ್ನು ಆಚರಿಸಿ ಪಸರಿಸುವ ಆದರ್ಶ ಜೀವಿ ಶ್ರೀ ಸುಭಾಷ ರಾಠೋಡ ಅವರನ್ನು ರಾಜ್ಯ ಸರಕಾರ ಎಂಎಲ್ಸಿ ಮಾಡಬೇಕೆಂದು ಇಡೀ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯವಾಗಿದೆ. ರಾಜ್ಯದಲ್ಲಿ ಬಂಜಾರ ಸಮಾಜದವರ ಮೇಲೆ ಎಲ್ಲೇ ಅನ್ಯಾಯವಾದರೂ ಬಂಜಾರ ಸಮಾಜಕ್ಕಾಗಿ ಹಲವಾರು ಹೋರಾಟ ಮಾಡಿದ್ದಾರೆ. ಚಿಂಚೋಳಿ ತಾಲೂಕಿನ ತಾಂಡಾಗಳಲ್ಲಿ ಮಕ್ಕಳ ಮಾರಾಟ ಪ್ರಕರಣವಾದಾಗ ಮುಂಚೂಣಿಯಲ್ಲಿ ನಿಂತು ಸಮಸ್ಸೆಗೆ ಒಳಗಾದ ಜನರ ಹಕ್ಕಿಗಾಗಿ ಹೋರಾಟ ಮಾಡಿ ತಾಂಡಾ ವಾಸಿಗಳಿಗೆ ನ್ಯಾಯ ದೊರೆಯುವಂತೆ ಮಾಡಿದ್ದಾರೆ. ಅಲ್ಲದೆ ಹಲವು ಬಾರಿ ಅರಣ್ಯ ಇಲಾಖೆಯಿಂದ ತಾಂಡಾ ನಿವಾಸಿಗಳಿಗೆ ತೊಂದರೆಯಾದಾಗ ಹೋರಾಟ ಮಾಡಿ ಬಂಜಾರ ಸಮಾಜದ ಜನರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.ಇಂದು ಕೂಡ ರಾಜ್ಯದಲ್ಲಿ ಎಲ್ಲೇ ಬಂಜಾರ ಸಮಾಜದ ಮೇಲೆ ಅನ್ಯಾಯ ಆದರೂ ನ್ಯಾಯಕ್ಕಾಗಿ ಹೊರಡಲು ಸದಾ ಸಿದ್ದರಾಗಿರುತ್ತಾರೆ. ಕಳೆದ ಮೂರು ದಶಕಗಳಿಂದ ರಾಜಕೀಯದಲ್ಲಿ ಇದ್ದರೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಎಲ್ಲರ ಪ್ರೀತಿಗೆ ಪಾತ್ರರಾಗಿ, ಪಕ್ಷ ಹಾಗೂ ಪಕ್ಷದ ನಾಯಕರ ನಿಷ್ಠೆಗೆ ಪಾತ್ರರಾಗಿ ಕೊಟ್ಟಂತಹ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಶ್ರೇಯಸ್ಸು ಸುಭಾಷ ರಾಠೋಡ ಅವರಿಗೆ ಸಲ್ಲುತ್ತದೆ, ಚಿಂಚೋಳಿ ಕ್ಷೇತ್ರದಲ್ಲಿ ನೆಲ ಕಚ್ಚಿದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿ ಜಿಲ್ಲೆಯಲ್ಲಿಯೇ ಮಾದರಿ ಸಂಘಟನೆ ಮಾಡಿದ ಸುಭಾಷ ರಾಠೋಡ ಅವರು ಎರಡು ಬಾರಿ ಅಲ್ಪ ಮತಗಳ ಅಂತರದಿಂದ ಸೋತರೂ ಎದೆಗುಂದದೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಗಲಿರುಳು ತನ್ನಿಂದ ಆದಷ್ಟು ಸ್ಪಂದನೆ ಮಾಡುವಲ್ಲಿ ಯಾವತ್ತೂ ನಿರ್ಲಕ್ಷ್ಯ ಮಾಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಚಿಂಚೋಳಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ, ನಮ್ಮ ಭಾಗದ ಸಚಿವರು, ಪಕ್ಷದ ಮುಖಂಡರು ಯಾವತ್ತೂ ಸಾಮಾಜಿಕ ನ್ಯಾಯ ಕೊಡುವಲ್ಲಿ ಎತ್ತಿದ ಕೈ, ದಯಮಾಡಿ ಈ ಬಾರಿ ಸುಭಾಷ ರಾಠೋಡ ಅವರನ್ನು ಎಂಎಲ್ಸಿ ಮಾಡಿ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಒಕ್ಕೊರಲ ಒತ್ತಾಯ, ಒಂದು ಕಾಲದಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದ ರಾಜ್ಯದ ಅಧಿಕಾರ ಕೇಂದ್ರವಾಗಿದ್ದ ಚಿಂಚೋಳಿ ಇವತ್ತು ರಾಜಕೀಯದಲ್ಲಿ ಮುಂಚೂಣಿ ಸ್ಥಾನಕ್ಕೆ ಬರಲು ಹೆಣಗಾಡುತ್ತಿದೆ, ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದಿದ್ದೇವೆ ಆದರೂ ಜಯ ನಮ್ಮದಾಗಲಿಲ್ಲ ಕೇವಲ ಮೂರಂಕಿ ಮತಗಳ ಅಂತರದಿಂದ ಸೋತು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತೆ ಆಗಿದೆ, ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಚಿಂಚೋಳಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶಕ್ತಿ ರಾಜ್ಯಕ್ಕೆ ತೋರಿಸಿದ್ದಿವಿ, ಮಾನ್ಯ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ರಾಜ್ಯ ಅಧ್ಯಕ್ಷರು ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರು ನಮ್ಮ ವಿನಮ್ರ ವಿನಂತಿಗೆ ಸಕಾರಾತ್ಮಕವಾಗಿ ಪರಿಗಣಿಸಿ ಸುಭಾಷ ರಾಠೋಡ ಅವರನ್ನು ಎಂಎಲ್ಸಿ ಮಾಡಿ ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಒಕ್ಕೊರಲ ಒತ್ತಾಯ.
ಶರಣು ಪಾಟೀಲ ಮೋತಕಪಳ್ಳಿ, ವಕ್ತಾರರು, ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ.

ವರದಿ : ರಾಜೇಂದ್ರ ಪ್ರಸಾದ್

error: Content is protected !!