ಗೊಟೂರ್,ಕಣಸೂರ್ ಮಾರ್ಗ ಕಲಬುರ್ಗಿ ಹೋಗುವದಕ್ಕೆ ರಸ್ತೆ ದುರಸ್ಥಿ ಆಗಿರುವದರಿಂದ ಬಸ್ ಗಳು ಹೋಗುವದಕ್ಕೆ ವ್ಯವಸ್ಥೆ ಮಾಡಿ ಮುಖಂಡರ ಮನವಿ

ಕಾಳಗಿ ತಾಲೂಕಿನಲ್ಲಿ ಅತಿ ಮಳೆ ಆಗಿರುವದರಿಂದ ಕಾಳಗಿ ಯಿಂದ ಗೊಟೂರ್, ಕಣಸೂರ್ ಮಾರ್ಗ ಮದ್ಯಾ ರಸ್ತೆ ಪೂರ್ತಿ ಹಾಳಾಗಿರುವದರಿಂದ ಯಾವದೇ ಬಸ್ಸುಗಳು ಯಾವದೇ ಗಾಡಿಗಳು ಹೋಗುತಿರಲಿಲ್ಲಾ ತಾತ್ಕಾಲಿಕವಾಗಿ ಬಂದ್ ಮಾಡಿರುವುದರಿಂದ ಈವಾಗ ರಸ್ತೆ ದುರಸ್ಥಿ ಮಾಡಿದ್ದಾರೆ.ಸಾರ್ವಜನಿಕರಿಗೆ ಚಾಲಕರಿಗೆ ಅನುಕೂಲ ಮಾಡಿದರಿಂದ ಆದಕಾರಣ ಕಾಳಗಿಯಿಂದ ಗೊಟೂರ್, ಕಣಸೂರ್ ಮಾರ್ಗ ವಾಗಿ ಕಲಬುರಗಿ ಹೋಗುವದಕ್ಕೆ ಬಸ್ಸಿನ ವೆವಸ್ಥೆ ಮಾಡಿ ಎಂದು ಬಸ್ಸು ಘಟಕದ ಮುಖ್ಯಸ್ಥರಿಗೆ ಮುಖಂಡರ ವತಿಯಿಂದ ಮನವಿ ಪತ್ರ ಸಲ್ಲಿಸಿದರು . ಈ ಸಂಧರ್ಭ ದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರು ಪ್ರದೀಪ್ ಕುಮಾರ್ ಡೊಣ್ಣುರ್, ಗುರುನಂಜೇಶ್ ಕೋಣಿನ್, ಪ್ರವೀಣ್ ನಾಮದಾರ,ನಾಗರಾಜ್ ಸಜ್ಜನ ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!