ರಾಜ್ಯ ಮಾಹಿತಿ ಹಕ್ಕು ಮತ್ತು ಸಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಗದಗ ಜಿಲ್ಲಾ ಸಮಿತಿ ರಚನೆ.

ಗದಗ : ರವಿವಾರ ದಿನಾಂಕ 06/10/2024 ರಂದು ಗದಗ ಪ್ರವಾಸಿ ಮಂದಿರದಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಗದಗ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ರಾಜ್ಯದ್ಯಕ್ಷರಾದ ಚೆನ್ನಯ್ಯ ವಸ್ತ್ರದ,ಬೆಳಗಾವಿ ವಲಯ ಘಟಕದ ಉಪಾಧ್ಯಕ್ಷರಾದ ಶಿವಾಜಿ ಸನದಿ,ಧಾರವಾಡ ಜಿಲ್ಲಾಧ್ಯಕ್ಷರಾದಂತ ವಿರೂಪಾಕ್ಷಗೌಡ ಕುಲಕರ್ಣಿ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದಂತ ಹುಸೇನ್ಸಾಬ್ ನದಾಫ್, ಹಾಜರಿದ್ದರು ಕಾರ್ಯಕ್ರಮವನ್ನು ಸಂವಿಧಾನದ ಪೀಠಿಕೆ ಓದುವ ಮುಖಾಂತರ ಆರಂಭಿಸಲಾಯಿತು. ನಂತರ ಗದಗ ಜಿಲ್ಲಾ ಸಮಿತಿಗೆ ನೂತನವಾಗಿ ಪ್ರಕಾಶ್ ಬನ್ನಿ ಗಿಡದ ಇವರನ್ನು ಗೌರವ ಅಧ್ಯಕ್ಷರನ್ನಾಗಿ, ಮಂಜುನಾಥ್ ಹದ್ದನ್ನವರ್ ಅಧ್ಯಕ್ಷರು, ಮಂಜುನಾಥ ಆಸಂಗಿ ಉಪಾಧ್ಯಕ್ಷರು, ನಿಂಗನಗೌಡ ತಿಮ್ಮರೆಡ್ಡಿ ಉಪಾಧ್ಯಕ್ಷರು, ಶೌಕತ್ ಕಾತರಕಿ ಕಾರ್ಯಾಧ್ಯಕ್ಷರು, ಯಾಸಿನ್ ಸಾಬ್ ಬೊಡ್ಲೆ ಖಾನ್ ಪ್ರಧಾನ ಕಾರ್ಯದರ್ಶಿ, ಡಾ,ಸಿ ಎಸ್ ಹನುಮಂತ್ ಪಾಲದೊಡ್ಡಿ ಸಹಕಾರ ದರ್ಶ, ಜಾಕಿರ್ ಹುಸೇನ್ ನಾಗನೂರು ಸಹ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು ನಂತರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಲ್ಲ ಪದಾಧಿಕಾರಿಗಳನ್ನು ಗದಗ ಜಿಲ್ಲಾ ಕಮಿಟಿ ವತಿಯಿಂದ ಸತ್ಕರಿಸಲಾಯಿತು

 

ಇನ್ನು ಸಂಘಟನೆಯ ಗೌರವಾನ್ವಿತ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಪಿ ಎಚ್ ಕಡಿವಾಲ ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಅದ್ಭುತವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ ಹೋರಾಟಗಾರರು ಭಾಗಿಯಾಗಿದ್ದರು.