ಡಿಸೇಂಬರ್ 9ಕ್ಕೆ ಪಂಚಮಸಾಲಿ ಹೋರಾಟ 10ಸಾವಿರ ನ್ಯಾಯವಾದಿಗಳ ನೇತೃತ್ವದಲ್ಲಿ 5ಸಾವಿರಕ್ಕೂ ಹೆಚ್ಚು ರೈತರ ಟ್ರಾಕ್ಟರ್ ಗಳೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ – ಜಯ ಮೃತುಂಜಯ ಸ್ವಾಮಿ

ಬೆಂಗಳೂರ  : ನಾ ಗಾಂಧಿ ಭವನದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವಂಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿ,

 

ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕರೆದ ಸಭೆಯಲ್ಲಿ ಸ್ಪಷ್ಟತೆಯನ್ನು ನೀಡದ ಹಿನ್ನೆಲೆಯಲ್ಲಿ, ಡಿಸೆಂಬರ್ 9 ರಂದು ಸಮಾಜದ 10 ಸಾವಿರ ನ್ಯಾಯವಾದಿಗಳ ನೇತೃತ್ವದಲ್ಲಿ, 5 ಸಾವಿರಕ್ಕೂ ಹೆಚ್ಚು ರೈತರ ಟ್ರ್ಯಾಕ್ಟರ್ ಗಳೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ತೆರಳಿ, ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಣಯವನ್ನು ಶ್ರೀಗಳು ಘೋಷಿಸಿದರು.

 

ಗುರುಗಳ ಘೋಷಣೆಗೆ ನಾವೆಲ್ಲರೂ ಬದ್ದರಾಗಿದ್ದೇವೆ ಅಂದಿನ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವ ಮೂಲಕ ನ್ಯಾಯ ಪಡೆಯೋಣ ಎಂದು ಶಾಸಕ ಯತ್ನಾಳ್ ಮಾತನಾಡಿದರು.

 

 

ವರದಿ : ದೌಲಪ್ಪ ಮನಗೋಳಿ