ಹಿರಿಯ ನಾಗರಿಕ ದಿನ ದಂದು ಜೆಬಿ ಶಿಕ್ಷಣ ಸಂಸ್ಥೆ ವತಿಯಿಂದ ಹುಮನಾಬಾದ ತಾಲೂಕಿನ ಹಿರಿಯ ಶಿಕ್ಷಕರು ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಬಾಲಾಜಿ ಮಂದಿರ ಹತ್ತಿರ ವಿರುವ ಜೆಬಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆಯುವ ಉದ್ದೇಶ ದಿಂದ ವಿಶೇಷ ಕಾರ್ಯಕ್ರಮ ಒಂದು ಇಲ್ಲಿನ ಅಧ್ಯಕ್ಷರಾದ ಜಗನ್ನಾಥ ಹಲಮಡಗಿ ರವರ ನೇತೃತ್ವದಲ್ಲಿ ನಡೆಯಿತು,

ಕಾರ್ಯಕ್ರಮ ಉದ್ಘಾಟಕರಾಗಿ ಕಲ್ಯಾಣ ಕರ್ನಾಟಕ ಪ್ರತಿಷ್ಟಿತ ಬೀದರ್ ನಾ ಬಸವ ಕುಮಾರ ಪಾಟೀಲ್ ಆಗಮಿಸಿ ಮಕ್ಕಳನ್ನ ಉದ್ದೇಶಿಸಿ ಮಾತನಾಡಿ ಮಕ್ಕಳು ವಿದ್ಯಾಭ್ಯಾಸ ಮೂಲಕ ಶಿಕ್ಷಣದ ಮೂಲಕ ತನ್ನ ಜೀವನ ಬದಲಾಯಿಸಿ ಕೊಳ್ಳುವ ಬಗ್ಗೆ ಪ್ರೇರಣೆ ನೀಡಿದರು,

ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ವೆಂಕಟರೆಡ್ಡಿ, ಜೆ.ಬಿ ಎಜುಕೇಶನ್ ಸೊಸೈಟಿ ಯ ಅಧ್ಯಕ್ಷ ಡಾ ಜಗನ್ನಾಥ ಹಲಮಡಗಿ, ಪಂಡಿತ್ ಬಾಳರೆ, ಅಶೋಕ್ ಹಿರೇಮಠ್, ಪಂಡರಿನಾಥ ಹುಗ್ಗಿ, ಅಶೋಕ್ ಹಿರೇಮಠ್, DH ಬಿರಾದಾರ್, ಉಮಾಕಾಂತ್ ಮಹಾಜಾನ್, ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಹಲವಾರು ವಿಚಾರಗಳ ಕುರಿತು ಪ್ರೇರಣೆ ಮಾಡಿದರು ಹಾಗೂ ಸಾನ್ವಿ ಮೆಲೋಡಿಸ್ ನಾ ಸಾಕ್ಷಿ ರೇವಣಸಿದ್ಧ ಹಿರೇಮಠ್ ದಂಪತಿಗಳು ಸನ್ಮಾನ ಸ್ವೀಕರಿಸಿದ ನಂತರ ಕಾರ್ಯಕ್ರಮ ಕೊನೆ ಹಂತದಲ್ಲಿ ಕನ್ನಡ ಮಣ್ಣನ್ನು ಮರೀಬೇಡ ಎಂಬ ಹಾಡನ್ನು ಹಾಡುವ ಮೂಲಕ ನಾಡಿಗೆಗಾಗಿ ನಿಮ್ಮ ಹೃದಯ ಸದಾ ಮಿಡಿಯಲಿ ಎಂದು ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿದರು ಶಿಕ್ಷಣ ಸಂಸ್ಥೆ ಅನೇಕ ಶಿಕ್ಷಕರು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.