ಹಿಲಾಲ್ಪುರ್ ಮನ್ನಾ ಏ ಖೇಳಿ ರಸ್ತೆ ದುರಸ್ತಿಗೆ ದಲಿತ ಯುನಿಟ್ ಮೂವ್ಮೆಂಟ್ ಗೌತಮ್ ಡಾಕುಳಗಿ ಆಗ್ರಹ

ಬೀದರ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಿಲಾಲಪುರ ಗ್ರಾಮದ ಮಾರ್ಗವಾಗಿ ಮನ್ನಾ ಎ ಖೇಳಿ ರಸ್ತೆ. ಹಿಲಾಲಪುರ ಗ್ರಾಮದ ಹತ್ತಿರ ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಕನಿಷ್ಠ 3ವರ್ಷದಿಂದ ಈ ರಸ್ತೆ ದುರಸ್ಥಿಗೆ ಬಂದಿದು. ಈ ರಸ್ತೆ ಮನ್ನಾ ಎ ಖೇಳಿ ಮುಖ್ಯ ರಸ್ತೆ ವಾಗಿದ್ದು. ರಸ್ತೆಯ ಮೂಲಕ ಲಾರಿ ಬಸ್ಸು ಟ್ರಾಕ್ಟರ್ ಟ್ರಾಕ್ ಆಟೋ ಬೈಕ್ ಇತ್ಯಾದಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚಾರ ಬಯಸುತ್ತಾರೆ. ಸುಮಾರು 1 ಕಿ ಮೀ ಉದ್ದ ರಸ್ತೆ
ಹದ ಗೆಟ್ಟಿದೆ. ಸಾರ್ವಜನಿಕರ ಜೀವದ ಜೊತೆ ಹುಮ್ನಾಬಾದ್ ಶಾಸಕರು ಚೇಲಾಟ ವಾಡುತ್ತಿದ್ದಾರೆ. Ksrtc ಬಸ್ಸಿನಲ್ಲಿ 70-80 ಜನ ಇರುತ್ತಾರೆ. ಲೋಡ್ ತುಂಬಿದ ಲಾರಿ ಬೀಳುವ ಹಂತದಲ್ಲಿ ಚಲಿಸುತ್ತವೇ. ಮಳೆಗಾಲದಲ್ಲಿ ವಾಹನ ಸ್ಲಿಪ್ ಆಗಿ ಜನ ತನ್ನ ಪ್ರಾಣ ಕಳೆದುಕೊಳ್ಳುತ್ತಾರೆ. ಕೂಡಲೆ ರಸ್ತೆ ಸರಿಪಡಿಸಿ ಜನರನ್ನು ರಕ್ಷಿಸಿ. ಇಲ್ಲವಾದರೆ ತಾವು ರಾಜೀನಾಮೆ ನೀಡಿ ಎಂದು ದಲಿತ ಯುನಿಟ್ ಮೂವಮೆಂಟ್ ರಾಜ್ಯ ಸಂಘಟನಾ ಸಂಚಾಲಕ ಗೌತಮ್ ದೊಡ್ಡಿ ಡಾಕುಳಗಿ ಆಗ್ರಹಿಸಿದ್ದಾರೆ.

error: Content is protected !!