ಬಡ ಮಕ್ಕಳಿಗೆ ಉಚಿತ ಕಿಟ್ ವಿತರಣೆ .ಸಮಾಜ ಮುಖಿ ಸೇವೆ

ರಾಯಚೂರು : ಮಕ್ಕಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಹಿತದೃಷ್ಟಿಯಿಂದ ಸಂಘ ಸಂಸ್ಥೆಗಳು ಸರ್ಕಾರ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ನಿರಂತರವಾಗಿ ಮಾಡಬೇಕು. ಕಲಾ ಸಂಕುಲ ಸಂಸ್ಥೆ ಇಂದು 100 ಬಡ ಮಕ್ಕಳಿಗೆ ಕಿಟ್ ಗಳನ್ನು ವಿತರಿಸಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಸೇವಾ ಡಿಗ್ರಿ ಕಾಲೇಜ್ ಮುಖ್ಯಸ್ಥರು ಹಾಗೂ ರೋಟರಿ ಕ್ಲಬ್ ಸೆಂಟ್ರಲ್ಲಿನ ಅಧ್ಯಕ್ಷರಾದ ಡಾ. ಶರಣಬಸವ ಪಾಟೀಲ್ ಜೋಳದಡಿಗಿ ಮಾತನಾಡಿದರು
ಅವರು ಇಂದು ರಾಯಚೂರು ರಂಗಮಂದಿರದಲ್ಲಿ ಕಲಾಸಂಕುಲ ಸಂಸ್ಥೆ ಹಮ್ಮಿಕೊಂಡಿದ್ದ ಮಕ್ಕಳ ನೃತ್ಯೋತ್ಸವ ಹಾಗೂ ಬಡ ಸ್ಲಂ .ಚಿಂದಿ ಆಯುವ ಮಕ್ಕಳಿಗೆ
ಆರೋಗ್ಯ ಮತ್ತು ಶಿಕ್ಷಣ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ ಶಿಕ್ಷಣದಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿ ಅತಿ ಹಿಂದುಳಿದೀದೆ ಈ ದೃಷ್ಟಿಯಿಂದ ಶಿಕ್ಷಣ ಮತ್ತು ಆರೋಗ್ಯದ ವಿಷಯದಲ್ಲಿ ಗಂಭೀರವಾಗಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ. ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡಬೇಕಾಗಿದೆ ಬಡತನ ದಿಂದಲೂ ಮಕ್ಕಳು ಶಿಕ್ಷಣ ಕಲಿಯುವಲ್ಲಿ ಹಿಂದೇಟು ಹಾಕು ವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು .
ಸಮರಮದ ಅಧ್ಯಕ್ಷತೆಯನ್ನು ಕಲಾಸಂಖುವಿನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರೇಖಾ ಬಡಿಗೇರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಶೋಭಾ ಯಾದವ್ ಮತ್ತು ಉಪ್ಪಾರ್ ಮಹಿಳಾ ಸಮಾಜದ ಜಿಲ್ಲಾ ಅಧ್ಯಕ್ಷರಾದ ಸುರೇಖಾ ಉಪ್ಪಾರ್. ದಂಡಪ್ಪ ಬಿರಾದಾರ್ ಮತ್ತು ಪ್ರಸನ್ನ ಹಡಗಲಿ. ಡಾ.ಫಾತಿಮಾ ಹುಸೇನ್. ವೇದಿಕೆ ಮೇಲೆ ಇದ್ದರು.
ನಗರದ ಅಲ್ಲಮಪ್ರಭು ಕಾಲೋನಿಯಲ್ಲಿರುವ ಚಿಂದಿ ಆಯುವ ಬಡ ಕುಟುಂಬದ ಮಕ್ಕಳಿಗೆ ಹಾಗೂ ವಡವಾಟಿ . ಯಕ್ಲಸಪುರ.ಮತ್ತು ಆಶಪೂರ್ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಕಿಟ್ಟುಗಳನ್ನು ನೀಡಲಾಯಿತು.
ಅಲೆಮಾರಿ ಜನಾಂಗದ ಸಿಂದೊಳ್ಳಿ ಕಲ್ಯಾಣ ಕರ್ನಾಟಕ ಸಂಘದ ರಾಜ್ಯದ್ಯಕ್ಷರಾದ ಶ್ರೀನಿವಾಸ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಂಜುಳಾ ಹಾವೇರಿ .ಕುಮಾರಿ ಸಂತೋಷಿ ಇವರಿಗೆ ಅಭಿನಂದಿಸಲಾಯಿತು.
ಕಾರ್ಯದರ್ಶಿ ಮಾರುತಿ ಬಡಿಗೇರ ಸ್ವಾಗತಿಸಿದರು.
ಕಲಾವಿದ ಅಮರೇಗೌಡ ಕಾರ್ಯಕ್ರಮವನ್ನು ಆಚ್ಚುಕಟ್ಟಾಗಿ ನಿರ್ವಹಿಸಿದರು.

error: Content is protected !!