ರಾಜಕೀಯ ಬೇಡ ರೈತರ ಪರ ಕಾಳಜಿ ವಹಿಸಿ ಮಂತ್ರಿಗಳ ಮನೆ ಮುಂದೆ ಕುಳಿತು ಫ್ಯಾಕ್ಟರಿ ಚಾಲೋ ಮಾಡಿಸಿ ಶರಣು ಪಾಟೀಲ್ ಗೆ ವಿಜಯಕುಮಾರ್ ಚೇಂಗಟಾ ತಿರುಗೇಟು

ಚಿಂಚೋಳಿ : 

ಜಾದವ್ ಕುಟುಂಬದವರು ಚಿಂಚೋಳಿಯ ರೈತರ ಪರವಾಗಿ ನಿರಂತರವಾಗಿ ನಮ್ಮ ಭಾಗದಲ್ಲಿ ಒಂದು ಶುಗರ್ ಮಿಲ್ ತರಬೇಕೆಂದು ಪ್ರಯತ್ನಿಸುತ್ತಲೇ ಇದ್ದಾರೆ ಜಾಧವ ಅವರು ಕೇವಲ ಚಿಂಚೋಳಿ ರೈತರ ಆರ್ಥಿಕವಾಗಿ ಸದೃಢ ಆಗಬೇಕು ಅನ್ನುವ ಸಧುದ್ದೇಶ ಇಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ

ಅವರು ಕೇವಲ ಚುನಾವಣೆ ಬಂದಾಗ ಮಾತ್ರ ಪ್ರಯತ್ನಿಸಲಿಲ್ಲ ಕರ್ನಾಟಕ ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರದ ಸಾಕಷ್ಟು ಉದ್ಯಮಿ ಗಳನ್ನು ತಾಲೂಕಿಗೆ ಕರೆತಂದು ಸ್ಥಳ ಪರಿಶೀಲನೆ ಅವರ ಸ್ವಂತ ಖರ್ಚಿನಲ್ಲಿ ಮಾಡಿಸಿದವರು.

 

ನಮ್ಮ ತಾಲೂಕಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದೆ ಅವರ ಉದ್ದೇಶ ರೈತರ ಪರವಾಗಿ ಬಡಿದಾಡಿದರೆ ಇದು ರಾಜಕೀಯವೇ ರೈತರ ವಿಷಯದಲ್ಲಿ ರಾಜಕೀಯ ಮಾಡುವದಾದರೆ ಚಿಂಚೋಳಿ ರೈತರ ಕಾಳಜಿ ನಿಮಗಿದ್ದರೆ ನಿಮ್ಮ ಮಂತ್ರಿಗಳ ಮನೆ ಮುಂದೆ ಕುಳಿತು ಪರ್ಮಿಷನ್ ಕೊಡಿಸಿ, ಅದು ಬಿಟ್ಟು ರೈತ ವಿರೋಧಿ ಹೇಳಿಕೆ ಕೊಡುವದು ತಪ್ಪು ಯತ್ನಾಳ ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳುವ ನಿಮ್ಮ ಮಾತು ಒಂದು ಹಾಸ್ಯಸ್ಪದ

ಯತ್ನಾಳ್ ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಶಾಸಕರಾಗಿ ಕೆಲಸ ಮಾಡಿದವರು ಹಿರಿಯ ರಾಜಕಾರಣಿ ಅವರ ದಾರಿ ತಪ್ಪಿಸುವ ಮಾತು ಕೇಳಿದರೆ ನಗು ಬರುತ್ತೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ್ ಚೆಂಗಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

 

ವರದಿ : ರಾಜೇಂದ್ರ ಪ್ರಸಾದ್