ಮತ್ತೆ ಮಾನವೀಯತೆಯ ಮೌಲ್ಯವನ್ನು ಎತ್ತಿಹಿಡಿದ ಖಾಸಗೀ ಬಸ್ಸಿನ ಚಾಲಕ ಮತ್ತು ನಿರ್ವಾಹಕ

ಮಂಗಳೂರು :-
ನಿನ್ನೆ ದಿನಾಂಕ 2/09/2024ವಿಟ್ಲ ದಿಂದ ಮಂಗಳೂರು ಕಡೆಗೆ ಹೊರಟಿದ್ದ ಮೆರ್ಸಿ ಬಸ್’ನಲ್ಲಿ ಒಬ್ಬ ಮಧ್ಯ-ವಯಸ್ಕ ಮಹಿಳೆಯು ಮುಡಿಪು’ಗೆ ಅಂತ ಒಂದು ಟಿಕೆಟ್ ತೆಗೆದುಕೊಂಡಿದ್ದು ಬಸ್ಸು ಮುಡಿಪು ಬಸ್ಸು ನಿಲ್ದಾಣಕ್ಕೆ ಬಂದಾಗ ಮಹಿಳೆಯು ಇಳಿಯುವುದು ಕಾಣದಾದಾಗ ಬಸ್ಸು ನಿರ್ವಾಹಕರಾದ ಯಾಕೂಬ್ ರವರಲ್ಲಿ ಆ ಮಹಿಳೆ ಅಸ್ವಸ್ಥರಾಗಿ ಕುಸಿದು ಬಿದ್ದಿರುವುದಾಗಿ ಸಹ ಪ್ರಯಾಣಿಕರಾದವರು ತಿಳಿಸಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಯಾಕೂಬ್ ಡ್ರೈವರ್ ಸವಾದ್ ರ ಬಳಿ ಬಸ್ಸನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ಮನವಿ ಮಾಡಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಸವಾದ್ ರವರು ಕಣಚೂರು ಆಸ್ಪತ್ರೆಯ ತುರ್ತುವಿಭಾಗಕ್ಕೆ ಬಸ್ಸನ್ನು ಚಲಾಯಿಸಿದ್ದನ್ನು ಕ್ಯಾಮೆರಾ ಕಣ್ಣುಗಳು ಸೆರೆಹಿಡಿದಿವೆ. ಸದರೀ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಸದ್ಯ ಆಸ್ಪತ್ರೆಯಲ್ಲೇ ದಾಖಲಾಗಿದ್ದಾರೆ.

ಮಾನವೀಯತೆಯನ್ನು ಮೆರೆದ ಸಹೋದರರಿಗೆ ಆ ದೇವನು ಆಯುರಾರೋಗ್ಯ ಕರುಣಿಸಲೆಂದು ಹಾರೈಸೋಣ