ಸಚಿವ ಸತೀಶ್ ಜಾರಕಿಹೊಳಿ ಸುಪುತ್ರ ಯುವ ನಾಯಕ ರಾಹುಲ್ ಜಾರಕಿಹೊಳಿ ಜನ್ಮದಿನಾಚರಣೆ ಅದ್ದೂರಿ

 

 

ಕಾಂಗ್ರೆಸ್ ನಾಯಕರಾದ ರಾಹುಲ ಜಾರಕಿಹೊಳಿ ಯವರ 25ನೇ ಹುಟ್ಟುಹಬ್ಬ ಆಚರಣೆ

ಚಿಕ್ಕೋಡಿ : ಚಿಕ್ಕೋಡಿಯಲ್ಲಿ ಹಮ್ಮಿಕೊಂಡಿದ್ದ ಹುಟ್ಟುಹಬ್ಬದ ಆಚರಣೆಗಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳುವ ಮುನ್ನ‌ ಮುಖಂಡರು ಹಾಗೂ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತ ಕೋರಿದರು

ಈ ವೇಳೆ ಚಿಕ್ಕೋಡಿ ನಗರದಲ್ಲಿ ಸಮಸ್ತ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಂಭ್ರಮಾರಣೆಯಲ್ಲಿ ಭಾಗವಹಿಸಿ ವಿವಿಧ ಮಠಾಧೀಶರ ಜೊತೆಗೆ ನನ್ನ 25 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಆಶೀರ್ವಾದ ಪಡೆದರು.

ಈ ವೇಳೆ ಪೂಜ್ಯ ಶ್ರೀ ಚರಮೂರ್ತಿ ಚರಂತೇಶ್ವರ ಮಹಾಸ್ವಾಮಿಗಳು,ಮೊಟಗಿ ಮಠದ ಪೂಜ್ಯಶ್ರೀ ಪ್ರಭುಚನ್ನಬಸವ ಮಹಾಸ್ವಾಮೀಜಿ, ಚಿಕ್ಕೋಡಿ ಚರಮೂರ್ತಿ ಮಠದ ಶ್ರೀ ಮ.ನಿ.ಪ್ರ ಸಂಪಾದನಾ ಮಹಾಸ್ವಾಮಿ, ನಿಪ್ಪಾಣಿ ಸಮಾಧಿಮಠದ ಶ್ರೀ ಪ್ರಾಣಲಿಂಗ ಸ್ವಾಮೀಜಿ, ಕಕಮರಿ ಶ್ರೀ ರಾಯಲಿಂಗೇಶ್ವರ ಮಠದ ಶ್ರೀ ಅಭಿನವ ಗುರುಲಿಂಗ ಜಂಗಮ ಮಹಾಸ್ವಾಮೀಜಿ, ನಂದಿಕುರಳಿ ಪಂಚಲಿಂಗೇಶ್ವರ ಮಠದ ಶ್ರೀ ವೀರಭದ್ರೇಶ್ವರ ಸ್ವಾಮೀಜಿ, ಬಾ ಸವದತ್ತಿ ಅನಂತಶ್ರಮಮಠ ಶ್ರೀ ಶಿವಶಂಕರ ಸ್ವಾಮೀಜಿ, ಪರಮಾನಂದವಾಡಿ ಶ್ರೀ ಅಭಿನವ ಬ್ರಹ್ಮಮಾನಂದ ಸ್ವಾಮೀಜಿ, ಸಂಕೇಶ್ವರ ಶ್ರೀ ಶಂಕರಲಿಂಗ ಸ್ವಾಮೀಜಿ, ಶ್ರೀ ಶರಣ ಬಸವ ದೇವರು ಸ್ವಾಮೀಜಿ, ಹುಕ್ಕೇರಿಯ ಕ್ಯಾರಗುಡ್ಡ ಶ್ರೀ ಔಜಿಕರ ಸ್ವಾಮೀಜಿ, ಘೋಡಗೇರಿ ಶ್ರೀ ಕಾಶಿನಾಥ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಿದ್ದರು.

 

ಈ ವೇಳೆ ಶಾಸಕರಾದ ಶ್ರೀ ಗಣೇಶ ಹುಕ್ಕೇರಿ, ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಕಾಂಗ್ರೆಸ್ ಮುಖಂಡರಾದ ಉತ್ತಮ ಪಾಟೀಲ್ ಬುಡಾ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ ಅವರು ಉಪಸ್ಥಿತರಿದ್ದರು.

ವರದಿ / ಸದಾನಂದ ಎಂ ಎಚ್