ಹುಕ್ಕೇರಿ ತಾಲೂಕಿನ ಬಗರನಾಳ ಗ್ರಾಮದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆಯನ್ನು ಉದ್ಘಾಟನೆ ಮಾಡಲಾಯಿತು. ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ್ ಕಾಂಬಳೆ ಅವರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿ ತಮ್ಮ ಹಕ್ಕುಗಳಿಗಾಗಿ ನ್ಯಾಯಕ್ಕಾಗಿ ಸ್ವಾತಂತ್ರಕ್ಕಾಗಿ ತಾವೆಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಈ ಭಾಗದ ಜನರಿಗೆ ತಿಳಿಸಿ ಹೇಳುವುದು ಹಾಗೂ ಅವರ ವಿಚಾರ ತತ್ವ ಸಿದ್ಧಾಂತಗಳಿಗೆ ತಾವೆಲ್ಲರೂ ಬದ್ಧರಾಗಿ ಹೋರಾಡಬೇಕೆಂದು ಹೇಳಿದರು ಭೀಮವಾದ ದಲಿತ ಸಂಘರ್ಷ ಸಮಿತಿ ತಮ್ಮ ಎಲ್ಲಾ ಸಮಸ್ಯೆಗಳಿಗೆ ಅನ್ಯಾಯಗಳಿಗೆ ತೊಂದರೆಗಳಿಗೆ ಯಾವಾಗಲೂ ಹೋರಾಟ ಮಾಡುತ್ತದೆ ಎಂದು ಹೇಳಿದರು ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಕೆಂಪಣ್ಣ ಶಿರಹಟ್ಟಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ರೀ ಮಂಜುನಾಥ್ ಪಾಟೀಲ್ ತಾಲೂಕ ಸಂಚಾಲಕರಾದ ಮಂಜುನಾಥ್ ಪಡೆದಾರ ಭರ್ಮಪ್ಪ ಹರಿಜನ್ ಆನಂದ್ ತಳವಾರ್ ಕೆ ವೆಂಕಟೇಶ್ ಶಿವಾನಂದ್ ಮಾಳಗೆ ರಾಜು ಮೂತ ಮಹೇಶ್ ಮಾಳಗೆ ಮಹಿಳಾ ಘಟಕದ ಸದಸ್ಯರಾದ ಶ್ರೀಮತಿ ರೇಖಾ ಬಂಗಾರಿ, ಆರತಿ ಕಾಂಬಳೆ ಶಾಂತಾ ಹೇಳಿವಿ ಬಗರನಾಳ ಗ್ರಾಮ ಶಾಖೆಯ ವಸಂತ್ ಮಾದರ್ ಸಂತೋಷ್ ಮಾದರ್ ಕೆಂಪಣ್ಣ ಮಾದರ್ ಹಾಗೂ ಮಹಿಳಾ ಘಟಕದ ಬಾಳವ್ವ ಮದರ್ ಸುಮಾ ಮದರ್ ಲಕ್ಷ್ಮಿ ಮಾದರ್ ಮುಂತಾದವರು ಉಪಸ್ಥಿತರಿದ್ದರು.
ವರದಿ/ಸದಾನಂದ ಎಚ್