ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಮಟ್ಟದ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಕಲಬುರ್ಗಿ : ಸಪ್ಟೆಂಬರ್ 16ರಂದು ಅಫ್ಜಲ್ ಪುರ್ ಪಟ್ಟಣದಲ್ಲಿ ನಡೆಯಲಿರುವ ಕಾನಿಪಾ ದ್ವನಿ ಪತ್ರಕರ್ತರ ಜಿಲ್ಲಾಮಟ್ಟದ ಸಮಾವೇಶ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಇಂದು ಕಲ್ಬುರ್ಗಿ ನಗರದ ಕಾನಿಪಾಧ್ವನಿ ಜಿಲ್ಲಾ ಪತ್ರಿಕಾ ಭವನದಲ್ಲಿ ಅದ್ದೂರಿಯಾಗಿ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಪಗಡೆ ಮಾತನಾಡಿ ಸಪ್ಟೆಂಬರ್ ೧೬ರಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಿಸ್ಮರಣೀಯ ದಿನವಾಗಿದ್ದು ಎಲ್ಲ ಸ್ವಾಭಿಮಾನಿ ಪತ್ರಕರ್ತರು ಕಾರ್ಯಕ್ರಮದ ಯಶಸ್ವಿಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ನಂತರ ಆಫ್ಜಲ್ಪುರ್ ತಾಲೂಕ ಅಧ್ಯಕ್ಷ ಯಲ್ಲಾಲಿಂಗ ಪೂಜಾರಿ ಮಾತನಾಡಿ ಈ ಬೃಹತ್ ಸಮಾವೇಶಕ್ಕೆ ನಾವೆಲ್ಲರೂ ಹಗಲಿರುಳು ಶ್ರಮಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾಗೋಣ ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ, ಉಪಾಧ್ಯಕ್ಷ ಮಹಮ್ಮದ್ ಸಾಬೀರ ಗೌರಿ, ಸಹಕಾರದರ್ಶಿ ಪವನ್ ಕುಲಕರ್ಣಿ, ಖಜಾಂಚಿ ರಾಜಶೇಖರ್ ಮಾತುಳ್ಳಿ, ಅಫ್ಜಲ್ ಪುರ್ ತಾಲೂಕ ಅಧ್ಯಕ್ಷ ಎಲ್ಲಾ ಲಿಂಗ ಪೂಜಾರಿ, ಗೌರವಾಧ್ಯಕ್ಷ ಶ್ರೀಶೈಲ್ ಸಿಂಗೆ, ಉಪಾಧ್ಯಕ್ಷ ಚನ್ನು ಇಂಚಗೇರಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಅಣ್ಣೇನವರ್, ಖಜಾಂಚಿ ಉಮೇಶ್ ಅಚಲೇರಿ, ಮಂಜು ಹಡಪದ್, ಮಲ್ಲು ಬಗಲೂರ್, ಜೇವರ್ಗಿ ತಾಲೂಕ ಅಧ್ಯಕ್ಷ ಚಂದ್ರಶೇ ಗೌಡ ಮಾಲಿಪಾಟೀಲ್, ಆಳಂದ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕ್ಸಿರ ಸಾಗರ್, ಸಂತೋಷ್ ಪೂಜಾರಿ, ಕಾಶಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.