ಔರಾದ್ ತಾಲೂಕಿನ ಜೋಜನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗುರ್ ಎಂ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ .ಗಿರೀಶ ಬಡೊಳೆ ಅವರು ಆಕಸ್ಮಿಕವಾಗಿ ಭೇಟಿ ನೀಡಿ, ಗ್ರಾಮದಲ್ಲಿನ ಜೆ ಜೆ ಎಮ್ ಕಾಮಗಾರಿ ಹಾಗೂ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿ ಗ್ರಾಮದಲ್ಲಿ ಗ್ರಾಮದಲ್ಲಿ ಈಗಾಗಲೇ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ. ದಿನಾಲು ಮಹಿಳೆಯರು ಎಲ್ಲಾ ಕೆಲಸಗಳನ್ನು ಬದಿಗಿಟ್ಟು ಕೇವಲ ನೀರಿಗಾಗಿ ಮಾತ್ರ ದಿನ ಕಳೆಯುವಂತಾಗಿದೆ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ನಮ್ಮೂರಿಗೆ ಆದಷ್ಟು ಬೇಗನೇ ಸಮರ್ಪಕವಾಗಿ ನೀರಿನ ವ್ಯವಸ್ಥೆ ಒದಗಿಸಿ ಕೊಡಿ ಎಂದು ತಮ್ಮ ಗೋಳು ತೋಡಿಕೊಂಡರು. ಇದೇ ವೇಳೆ ಗ್ರಾಮದ ಮುಖಂಡ ರಾಜಕುಮಾರ್ ಬಿರಾದರ್ ಮಾತನಾಡಿ , ಗ್ರಾಮದಲ್ಲಿ ಜೆ ಜೆ ಎಂ ಕಾಮಗಾರಿ ಇನ್ನು ನೆನೆಗುದಿಗೆ ಬಿದ್ದಿದೆ.
ಜೆ ಜೆ ಎಂ ಯೋಜನೆಯಲ್ಲಿ ನಮ್ಮೂರಿನ ಸಮಸ್ಯೆ ಬಗೆಹರಿಸಲು ಸಮೀಪದ ಶೆoಬೆಳ್ಳಿ ಕೆರೆಯಿಂದ ತೆರೆದ ಬಾವಿ ತೋರಿಸಿ ಅಲ್ಲಿಂದ ನಮ್ಮೂರಿನವರೆಗೆ ಪೈಪ್ ಲೈನ್ ಅಳವಡಿಸಿ ಸಾರ್ವಜನಿಕರ ನೀರಿನ ಸಮಸ್ಯೆ ಪರಿಪೂರ್ಣವಾಗಿ ಬಗೆಹರಿಸಬೇಕೆಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸಿಇಓ ಅವರು ಸ್ಥಳದಲ್ಲಿದ್ದ ತಾಲೂಕ ಪಂಚಾಯತಿ ಇಒ ಮಾಣಿಕ್ಯರಾವ್ ಪಾಟೀಲ್ ಅವರಿಗೆ ತಿಳಿಸಿದರು,
ಜೆಜೆ ಎಂ ಯೋಜನೆಯಲ್ಲಿ ಇನ್ನು ಲಕ್ಷ ಗಟ್ಟಲೆ ರೂಗಳ ಹಣ ಬಾಕಿ ಉಳಿದುಕೊಂಡಿದೆ. ಈ ಬಾಕಿ ಇರುವ ಹಣವನ್ನು ತೆರೆದ ಬಾವಿಗೆ ಉಪಯೋಗಿಸಿ ನೀರಿನ ಸಮಸ್ಯೆ ಬಗೆಹರಿಸುವ ವ್ಯವಸ್ಥೆ ಮಾಡಲಾಗುವುದೆಂದು ಭರವಸೆ ನೀಡಿದರು.
ಜೆಜೆ ಎಂ ಕಾಮಗಾರಿ ಯೋಜನೆಯಿಂದ ಎಲ್ಲಾ ಮನೆಗಳಿಗೆ ನೀಡಿದ ಪೈಪ್ ಲೈನ್ ಕಲೆಕ್ಷನ್ ನಾಳೆಯಿಂದ ಮತ್ತೊಮ್ಮೆ ಪರೀಕ್ಷಿಸಿ ಎಲ್ಲಾ ಮನೆಗಳಿಗೆ ನೀರನ್ನು ಸಮರ್ಪಕವಾಗಿ ಒದಗಿಸಿದ ಮೇಲೆ ಜೆಇ ಮತ್ತು
ಪಿ ಡಿ ಓ ಸಮರ್ಪಕವಾಗಿ ಗಮನ ಹರಿಸಿ ಎಲ್ಲ ವ್ಯವಸ್ಥೆ ಸರಿಯಾದ ನಂತರ ತಮ್ಮ ಸುಪರ್ದಿಗೆ ಪಡೆಯಬೇಕೆಂದು ಸಿ ಇ ಒ ತಿಳಿಸಿದರು. ತಾ ಪಂ ಇಒ ಮಾಣಿಕ ರಾವ್ ಪಾಟೀಲ್, ದೇವರಾಜ್ ಮೇತ್ರೆ, ಪಿಡಿಒ ನರಸಿಂಗ ಮಾನೆ, ಊರಿನ ಮುಖಂಡರಾದ ಗ್ರಾಮ ಪಂಚಾಯತ್ ಸದಸ್ಯ ರಾಜಕುಮಾರ ಮಾನುರೆ, ರಾಜಪ್ಪ ಬಿರಾದರ್, ವೀರಶೆಟ್ಟಿ ಬಿರಾದರ್, ಸಂಜು ಸಾಗರ್, ಕವಿರಾಜ್ ಶೇರಿಕರ್, ಸುನಿಲ್ ಬಿರಾದರ್, ಪ್ರಭು ಸೇರಿದಂತೆ ಇತರರಿದ್ದರು.
ವರದಿ: ರಾಚಯ್ಯ ಸ್ವಾಮಿ ಔರಾದ್ (ಬಾ)