ಹಾರಕೂಡ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಚಿಂಚೋಳಿ ಸಾಹೇಬ್ ಭಾಗಿ ಇದುವೇ ಸರ್ವ ಜನಾಂಗದ ಶಾಂತಿಯ ತೋಟ ಶರಣರ ನಾಡು

ಹಾರಕೂಡ ಶ್ರೀಮಠದ ಸೇವಾಧಾರಿ ಗಳಿಂದ ಪೂಜ್ಯ ಶ್ರೀ ಡಾ ಚೆನ್ನವೀರ ಶಿವಾಚಾರ್ಯರಿಗೆ ಗುರುವಂದನಾ ಹಾಗೂ ತುಲಭಾರ ಕಾರ್ಯಕ್ರಮ ಉಸ್ಮಾನ್ ಖಾನ್ ಮಿರ್ಜಾಯಿ ಭಾಗಿ

ಸೂಫಿ ಸಂತ ಶರಣರ ನಾಡು ಎಂದೇ ಸುಪ್ರಸಿದ್ದಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠ ದಲ್ಲಿ ಶ್ರೀಮಠದ ಸೇವಾಧಾರಿ ಗಳಿಂದ ಪೂಜ್ಯ ಶ್ರೀ ಡಾ ಚೆನ್ನವೀರ ಶಿವಾಚಾರ್ಯರಿಗೆ ಗುರುವಂದನಾ ಹಾಗೂ ತುಲಭಾರ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಒಬ್ಬ ಹಿಂದೂ ಧರ್ಮ ಗುರುಗಳ ಗುರುವಂದನಾ ಕಾರ್ಯಕ್ರಮ ದಲ್ಲಿ ಮುಸ್ಲಿಮ್ ಧರ್ಮದ ಗುರುಗಳನ್ನು ಆಹ್ವಾನಿಸಿರುವುದು ವಿಶೇಷ ವಾಗಿತ್ತು ಹೌದು ಹುಮನಾಬಾದ ತಾಲೂಕಿನ

ಕುಮಾರ ಚಿಂಚೋಳಿಯ ಹಜರತ್ ಉಸ್ಮಾನ್ ಖಾನ್ ಮಿರ್ಜಾಯಿ ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ಆಹ್ವಾನಿಸಲಾಗಿತ್ತು ಅತಿಥಿ ಯಾಗಿ ಕಾರ್ಯಕ್ರಮಕ್ಕೆ ಭಾಗವಹಿಸಿದಾಗ ಸ್ವತಃ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ ಗೌರವಿಸಿದರು ಶರಣರ ನಾಡಿನಲ್ಲಿ ಸಮಾನತೆ ಸಹೋದರತೆ ಸಹಬಾಳ್ವೆ ಜೀವಂತ ವಾಗಿದೆ ಎನ್ನುವುದಕ್ಕೆ ಈ ಕಾರ್ಯಕ್ರಮವೆ ಸಾಕ್ಷಿ,