ಮಾನ ರೈತ ಬಾಂಧವರೇ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ಇನ್ನೇನು ಬಿತ್ತನೆ ಕಾರ್ಯಗಳು ಕೂಡ ಪ್ರಾರಂಭವಾಗುತ್ತವೆ. ಇಂತಹ ಒಂದು ಸಂದರ್ಭ ಒಂದು ಬಳಸಿಕೊಂಡು ನಕಲಿ ರಸಗೊಬ್ಬರ ಮತ್ತು ಬೀಜ ಕಂಪನಿಗಳು ಮಾರಾಟ ಮಾಡುವುದಕ್ಕೆ ತಮ್ಮ ಜಾಲವನ್ನು ಮುಗ್ದ ರೈತರ ಮೇಲೆ ಹಾಕಿ ಅಗ್ಗದ ದರದಲ್ಲಿ ಬೀಜಗಳನ್ನು ಮಾರಾಟ ಮಾಡಿ ನಾಳೆ ಆ ಬೀಜಗಳು ಮೊಳಕೆ ಒಡೆಯದೆ ಬೆಳೆ ನಾಶವಾದಾಗ ಸಾಲ ಸೋಲ ಮಾಡಿದ ರೈತ ನೇಣಿಗೆ ಶರಣಾಗುತ್ತಾನೆ ಇನ್ನು ಮುಂದೆ ಪ್ರತಿಯೊಬ್ಬ ರೈತರು ಕೂಡ ಬೀಜಗಳನ್ನು ಖರೀದಿ ಮಾಡುವಾಗ ನೋಂದಣಿಯ ಕಂಪನಿಗಳಿಂದ ಮಾತ್ರ ಬೀಜಗಳನ್ನು ಖರೀದಿಸಬೇಕು ಅದು ಕೃಷಿ ಇಲಾಖೆಯ ಗಮನಕ್ಕೆ ತಂದು ಅಸಲಿ ನಕಲಿ ದೃಢಪಡಿಸಿಕೊಳ್ಳಬೇಕು ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಚೆನ್ನಯ್ಯ ವಸ್ತ್ರದ ಹೇಳಿದ್ದಾರೆ..