ಚಿಂಚೋಳಿ : ಇತ್ತೀಚಿಗಷ್ಟೇ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರು ಹತಾಶೆ ಹೇಳಿಕೆ ನೀಡಿದ್ದು ಉಸ್ತುವಾರಿ ಮಂತ್ರಿಗಳಿಗೆ ಸಂತೋಷಪಡಿಸಲು ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ,
ತಮ್ಮ ವೈಯಕ್ತಿಕ ಕೆಲಸಗಳನ್ನು ಆಗಲು ಈ ರೀತಿ ಹೇಳಿಕೆ ನೀಡುತ್ತಿದ್ದು, ಡಾ. ಅವಿನಾಶ ಜಾದವ ಅವರು ಪ್ರತಿಯೊಬ್ಬರಿಗೂ ಸಮಾನರಾಗಿ ತಿಳಿಯುವ ಹಾಗೂ ತಾಲೂಕಿನ ಬಗ್ಗೆ ಸದಾ ಒಳ್ಳೆಯ ಬಗ್ಗೆ ಯೋಚನೆ ಮಾಡುವ ಅಭಿವೃದ್ಧಿಗೋಸ್ಕರ ಸದಾ ಮುಂಚೂಣಿಯಲ್ಲಿರುವ ಜನಪರ ಕೆಲಸಕ್ಕೆ ಯಾವತ್ತೂ ಕೂಡ ಹೊಂದಾಣಿಕೆ ಮಾಡಿಕೊಳದಂತಹ ನಿಷ್ಠಾವಂತ ನಾಯಕರಾಗಿದ್ದು, ತಾಲೂಕಿನಲ್ಲಿ ಹಲವಾರು ಮಾಡದಿರುವಂತಹ ದೊಡ್ಡಮಟ್ಟದ ಕೆಲಸಗಳನ್ನು ನಮ್ಮ ಶಾಸಕರ ಮುಂದಾಳತ್ವದಲ್ಲಿ ಮಾಡಿರುವಂತದ್ದು ಇಥನಾಲ್ ಪವರ್ ಘಟಕ ಸ್ಥಾಪನೆಯಾಗಿದ್ದು, ಪವಿತ್ ಸಂದರ್ಭದಲ್ಲಿ ಮೊಟ್ಟಮೊದಲ ಆಕ್ಸಿಜನ್ ಘಟಕ ತಾಲೂಕ ಆಸ್ಪತ್ರೆಯಲ್ಲಿ ಪ್ರಾರಂಭವಾಗಿದ್ದು, ಪ್ರತಿಯೊಂದು ಗ್ರಾಮಗಳಲ್ಲೂ ಸುಂದರವಾದ ರಸ್ತೆಗಳ ನಿರ್ಮಾಣ, ಚರಂಡಿಗಳ ನಿರ್ಮಾಣ, ಪೋಲಕಪಳ್ಳಿಯ ಗಾರ್ಡನ್, ತಾಲೂಕಿನಲ್ಲಿರುವ ಶಾಲಾ ಕಟ್ಟಡಗಳ ನಿರ್ಮಾಣ, ಇನ್ನು ನೂರಾರು ಕೆಲಸಗಳ ಮಾಡಿದ್ದು ಅಭಿವೃದ್ಧಿಯ ಅಧಿಕಾರದಂತೆ ಕೆಲಸ ನಿರ್ವಹಿಸಿದ್ದಾರೆ. ಚಂದ್ರಂಪಳ್ಳಿ ಮೂಲ ಸೌಕಾರಕ್ಕಾಗಿ ಹಲವು ಬಾರಿ ಅನುದಾನ ತಂದಿದ್ದು ಆ ಅನುದಾನವನ್ನ ಹಿಂಪಡೆಯಲಾಗಿದೆ ಆದಾಗಿ ನಿರಂತರವಾಗಿ ಅನುದಾನ ತರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ, ಮುಂದೆಯೂ ಮಾಡುತ್ತಿರುತ್ತಾರೆ. ತಮ್ಮಂತ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡರು ತಾಲೂಕಿಗೆ ತಮ್ಮ ಕೊಡುಗೆ ಏನೆಂಬುದು ಪ್ರಜ್ಞಾವಂತ ಮತದಾರರಿಗೂ ಕೂಡ ಗೊತ್ತಿದ್ದು ಅದಕ್ಕಾಗಿಯೇ ಜನರು ಸದಾ ನಮ್ಮ ಶಾಸಕರ ಪರವಾಗಿ ಇದ್ದಾರೆ ಹೊರತು ನಿಮ್ಮ ಪರ ಅಲ್ಲ!
ರಾಜಕಾರಣದಲ್ಲಿ ಚುನಾವಣಾ ಇದ್ದಾಗ ಮಾತ್ರ ರಾಜಕೀಯ ಭಾಷಣ ಮಾಡಿ ಈಗ ತಾಲೂಕಿಗೆ ಸಮಗ್ರ ಅಭಿವೃದ್ಧಿಗೋಸ್ಕರ ಕೆಲಸ ಮಾಡಿ ತಾಲೂಕಿನ ಜನತೆಯ ಪುಣ್ಯ ಪಡೆದುಕೊಳ್ಳಿ. ಶಾಸಕರ ವರ್ಚಸ್ಸು ಕಡಿಮೆ ಮಾಡಲು ಈ ತರಹದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು ಇದರಿಂದ ಶಾಸಕರ ವರ್ಚಸ್ಸು ಕಡಿಮೆ ಮಾಡುತ್ತೇನೆಂಬ ಭ್ರಮೆಯಲ್ಲಿ ತಾವಿದ್ದು, ಇದರಿಂದ ತಾವು ಏನು ಸಾಧಿಸಲಾಗದು ಎಂದು ಇಡೀ ತಾಲೂಕಿನ ಜನತೆಗೆ ಗೊತ್ತಿದೆ. ತಾವು ಮೊದಲು ಒಳ್ಳೆಯ ರಾಜಕಾರಣಿ ಆಗಿ ಹೆಸರು ಮಾಡಿ ಹಾಗೂ ತಾಲೂಕಿನ ಅಭಿವೃದ್ಧಿಗೋಸ್ಕರ ಕೆಲಸ ಮಾಡಿ ಆಗ ಜನರು ತಮ್ಮನ್ನು ನೋಡುವ ದೃಷ್ಟಿ ಬದಲಾಗುತ್ತೆ ವಿನಾಕಾರಣ ಶಾಸಕ ಡಾ. ಅವಿನಾಶ ಜಾಧವ ಅವರ ಮೇಲೆ ವಿನಾಕಾರಣ ಆಪಾದನೆ ಮಾಡುವುದು ಸರಿಯಲ್ಲ ಎಂದು ಮಹಾಶಕ್ತಿ ಘಟಕ ಅಧ್ಯಕ್ಷ ಅಭಿಷೇಕ ಮಲಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್