ಒಂದು ಕಾರು, ಒಂದು ಟೆಂಪೋ ಟಾವಲರ್ ಹಾಗೂ
24 ವಿವಿಧ ಕಂಪನಿಯ ವಾಹನಗಳ ಬ್ಯಾಟರಿಗಳ ವಶ, ಮೌಲ್ಯ ₹11.50 ಲಕ್ಷ.
ಬೆಂಗಳೂರು : ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಸ್ಟೋರ್ನನ ಮ್ಯಾನೇಜರ್ ಆದ ರ್ಪಿಾದುದಾರರು ದಿನಾಂಕ:26/09/2024 ರಂದು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ.
ದೂರಿನಲ್ಲಿ ದಿನಾಂಕ:16/09/2024 ರಂದು ಸಂಜೆ ಯಾರೋ ಕಳ್ಳರು ಕೆಲಸ ಮಾಡಿಕೊಂಡಿರುವ ಸ್ಪೆರ್ನ ನೆಲ ಮಹಡಿಯ ಜನರೇಟರ್ನಲ್ಲಿದ್ದ ಎರಡು ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿಸಿರುತ್ತಾರೆ.
ಈ ಕುರಿತು ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆ ಹಾಕಿ, ದಿನಾಂಕ:16/05/2025 ರಂದು ಬೇಗೂರು ಕೊಪ್ಪ ರಸ್ತೆಯ ಬಳಿಯಿರುವ ನೈಸ್ ರೋಡ್ ಹತ್ತಿರ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿ, ಈ ಪ್ರಕರಣದಲ್ಲಿ ಬ್ಯಾಟರಿಗಳನ್ನು ಕಳವು ಮಾಡಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾನೆ. ಹಾಗೂ ತನ್ನ ಸ್ನೇಹಿತರುಗಳ ಜೊತೆ ಸೇರಿಕೊಂಡು ಬೆಂಗಳೂರು ನಗರ. ದೊಡ್ಡಬಳ್ಳಾಪುರದಲ್ಲಿ ವಾಹನಗಳ ಬ್ಯಾಟರಿಗಳನ್ನು ಹಾಗೂ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ನಗರದಲ್ಲಿ ಒಂದು ಟೆಂಪೋ ಟ್ರಾವೆಲರ್ ವಾಹನ ಮತ್ತು ತಮಿಳುನಾಡು ರಾಜ್ಯದಲ್ಲಿರುವ ಮತ್ತಿಕೆರೆಯಲ್ಲಿ ಒಂದು ಸ್ಕಾರ್ಫಿಯೋ ಕಾರ್ನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ದಿನಾಂಕ:17/05/2025 ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಸಹಚರರನ್ನು ಬನ್ನೇರುಘಟ್ಟದ ಶ್ಯಾನಭೋಗನಹಳ್ಳಿಯಲ್ಲಿ ಅವರುಗಳ ವಾಸದ ಮನೆಯಿಂದ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಮೇಲ್ಕಂಡ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾರೆ.
ಅದೇ ದಿನ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 06 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಆಭಿರಕ್ಷೆಗೆ ಪಡೆದ ಮೂವರು ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಬೇಗೂರು, ಹುಳಿಮಾವು ಪೊಲೀಸ್ ಠಾಣಾ ಸರಹದ್ದಿನಲ್ಲಿ ಬ್ಯಾಟರಿಗಳನ್ನು ಕಳವು ಮಾಡಿರುವುದಾಗಿ ಹಾಗೂ ಪ್ರಕರಣದಲ್ಲಿ ಕಳವು ಮಾಡಿದ್ದ ಬ್ಯಾಟರಿಗಳನ್ನು ಸಿಟಿ ಮಾರ್ಕೆಟ್ನಲ್ಲಿರುವ ಗುಜರಿ ಅಂಗಡಿ ಮತ್ತು ಜಿಗಣಿಯಲ್ಲಿರುವ ಬ್ಯಾಟರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾರೆ.
ದಿನಾಂಕ:19/05/2025 ರಂದು ಠಾಣಾ ಸರಹದ್ದಿನ ನೈಸ್ ರೋಡ್ ಬ್ರಿಡ್ಜ್ ಬಳಿಯ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಸ್ಕಾರ್ಪಿಯೋ ಕಾರ್ ಹಾಗೂ ಒಂದು ಟೆಂಪೋ ಟ್ರಾವೆಲರ್ ವಾಹನವನ್ನು
ವಶಪಡಿಸಿಕೊಳ್ಳಲಾಯಿತು.
ದಿನಾಂಕ: 20 ಮತ್ತು 21/05/2025 ರಂದು ಸಿಟಿ ಮಾರ್ಕೆಟ್ನ ಗುಜರಿ ಅಂಗಡಿಯಿಂದ 23 ವಿವಿಧ ಕಂಪನಿಯ ಬ್ಯಾಟರಿಗಳನ್ನು ಹಾಗೂ ಜಿಗಣಿಯಲ್ಲಿರುವ ಬ್ಯಾಟರಿ ಅಂಗಡಿಯೊಂದರಿಂದ 1 ಬ್ಯಾಟರಿಯನ್ನು
ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಗಳ ಬಂಧನದಿಂದ ಒಂದು ಸ್ಕಾರ್ಫಿಯೋ ಕಾರ್ ಹಾಗೂ ಒಂದು ಟೆಂಪೋ ಟ್ರಾವೆಲರ್ ಮತ್ತು 24 ವಿವಿಧ ಕಂಪನಿಯ ವಾಹನಗಳ ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ ₹11,50,000/- (ಹನ್ನೊಂದು ಲಕ್ಷದ ಐವತ್ತು ಸಾವಿರ ರುಪಾಯಿಗಳು).
ಈ ಪ್ರಕರಣದ ಆರೋಪಿಗಳ ಬಂಧನದಿಂದ 1) ಬೇಗೂರು ಪೊಲೀಸ್ ಠಾಣೆಯ-02 ಬ್ಯಾಟರಿ ಕಳವು ಪ್ರಕರಣಗಳು, 2) ಹುಳಿಮಾವು ಪೊಲೀಸ್ ಠಾಣೆಯ-03 ಬ್ಯಾಟರಿ ಕಳವು ಪ್ರಕರಣಗಳು, 3) ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ-01 ಬ್ಯಾಟರಿ ಕಳವು ಪ್ರಕರಣ, 4) ಮಹಾರಾಷ್ಟ್ರ ರಾಜ್ಯ ಕೊಲ್ಲಾಪುರ ನಗರ ಕರವೀರ ಪೊಲೀಸ್ ಠಾಣೆಯ-01 ವಾಹನ ಕಳವು ಪ್ರಕರಣ, 5) ತಮಿಳುನಾಡು ರಾಜ್ಯ ಮತ್ತಿಕೆರೆ ಪೊಲೀಸ್ ಠಾಣೆಯ-01 ವಾಹನ ಕಳವು ಪ್ರಕರಣ ಸೇರಿದಂತೆ ಒಟ್ಟು 08 ಪ್ರಕರಣಗಳು ಪತ್ತೆಯಾಗಿರುತ್ತವೆ.
ದಿನಾಂಕ:22/05/2025 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತರವರಾದ ಶ್ರೀಮತಿ, ಸಾರಾ ಫಾತಿಮಾ ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಉಪ ಪೊಲೀಸ್ ಆಯುಕ್ತರವರಾದ ಶ್ರೀ. ಕೆ.ಎಮ್ ಸತೀಶ ರವರ ನೇತೃತ್ವದಲ್ಲಿ ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೃಷ್ಣಕುಮಾರ್ ಪಿ.ಎಸ್, ಹಾಗೂ ಇತರೆ ಅಧಿಕಾರಿ/ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ವರದಿ : ಮುಬಾರಕ್ ಬೆಂಗಳೂರು