ಅಲ್ಪಸಂಖ್ಯಾತ ನಾಯಕರಲ್ಲೇ ಅತ್ಯಂತ ಹಿರಿಯ ನಾಯಕರಾಗಿರುವ ತನ್ವೀರ್ ಸೇಠ್ ರವರಿಗೆ ಸಚಿವ ಸ್ಥಾನ ನೀಡಿ – ಅಸ್ಲಮ್ ಮತ್ತೂರ್

ಹುಮನಾಬಾದ ಪಟ್ಟಣದ ಹೊರವಲಯದಲ್ಲಿ ನೆರೆವಾಗಿ ನಮ್ಮ jk ಕನ್ನಡ news ಜೊತೆಗೆ ಸಂದರ್ಶಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ನ್ಯಾಯ ಚಳುವಳಿ ರಾಜ್ಯಧ್ಯಕ್ಷರಾದ ಮೊಹಮ್ಮದ್ ಅಸ್ಲಮ್ ಮತ್ತೂರ್ ರವರು ಸಚಿವ ಸಂಪುಟ ರಚನೆಯಲ್ಲಿ ಅತ್ಯಂತ ಹಿರಿಯ ನಾಯಕ ಅಲ್ಪಸಂಖ್ಯಾತ ದಿನದಲಿತರಷ್ಟೇ ಅಲ್ಲದೆ ಪ್ರತಿಯೊಬ್ಬ ಸಮಾಜದವರ ಹೃದಯ ಗೆದ್ದoತಹ ಧೀಮಂತ ನಾಯಕ ನರಸಿಂಹ ರಾಜ ನಗರದ ಶಾಸಕರಾಗಿರುವ ತನ್ವೀರ್ ಸೇಠ್ ರವರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ರಾಜ್ಯಕ್ಕೆ ಅವರ ತಂದೆ ಹಾಗೂ ಅವರ ಕೊಡುಗೆ ಬಹಳಷ್ಟು ಇದೆ ಒಂದೇ ಪಕ್ಷದಿಂದ ಸುಮಾರು ಆರು ಬಾರಿ ಗೆದ್ದಂತಹ ಶಾಸಕ ಯಾರಾದರೂ ಇದ್ದರೆ ಅದು ತನ್ವೀರ್ ಸೇಠ್ ರವರು ಆಗಿದ್ದಾರೆ ರಾಜ್ಯದಲ್ಲೇ ಅತ್ಯಂತ ಗರಿಷ್ಠ ಮತಗಳನ್ನ ತನ್ನ ಕ್ಷೇತ್ರದಿಂದ ನೀಡುವ ಮೂಲಕ ಅವರ ಶಕ್ತಿ ಏನು ಅನ್ನೋದು ಅವರು ಲೋಕಸಭೆ ಚುನಾವಣೆ ಯಲ್ಲೇ ತೋರಿಸಿದ್ದಾರೆ ಎಂದರು,

ಇನ್ನೂ ಮೂಡ ಹಗರಣ ಕುರಿತು ಮಾತನಾಡಿದ ಅವರು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಿರುದ್ಧ ಬಿಜೆಪಿ ಹೈಕಮಾಂಡ್ ಮುನಿಸು ಇತ್ತು ಅವರು ತನ್ನ ಹೆಸರನ್ನು ಉಳಿಸಿಕೊಳ್ಳಲು ಮೂಡ ಎನ್ನೋ ಹಗರಣ ಎತ್ತಿ ಹಿಡಿದು ರಾಜ್ಯದ್ಯಂತ ಹೋರಾಟ ಹಮ್ಮಿಕೊಂಡು ಹೈಕಮಾಂಡ್ ಗೆ ಖುಷಿ ಪಡಿಸಿ ಸಿದ್ದರಾಮಯ್ಯ ರವರ ಹೆಸರಲ್ಲಿ ಕಪ್ಪುಚುಕ್ಕೆ ತರಲು ಹೊರಟಿದ್ದಾರೆ ಆದರೆ ಇದು ಅಸಾಧ್ಯ ಸಿದ್ದರಾಮಯ್ಯ ಒಂದೇ ಒಂದು ಕಳಂಕ ಇಲ್ಲದೆ ಧೀಮಂತ ನಾಯಕರಾಗಿದ್ದಾರೆ ರಾಜ್ಯದ ಜನ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯದ ಎಲ್ಲಾ ನಾಯಕರು ಅವರ ಪರವಾಗಿದ್ದಾರೆ ಎಂದರು.