ಗಣೇಶ್ ಚತುರ್ಥಿ ಈದ್ ಮಿಲಾದ್ ನಿಮಿತ್ಯ ಶಾಂತಿ ಸಭೆ 

ಬಲ್ಲಪ್ಪ ನಂದಗಾವಿ ಗುರುಶಾಂತಗೌಡ ದಾಶ್ಯಾಳ ಅವರ ನೇತೃತ್ವದಲ್ಲಿ ಬಸವನ ಬಾಗೇವಾಡಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಶಾಂತಿ ಸಭೆ ಜರಗಿತು.

 

Dysp. ಬಲ್ಲಪ್ಪ ನಂದಗಾವಿ, ಅವರು ಮಾತನಾಡುತ್ತಾ ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ್ ಘಟನೆ ನಡೆಯದಂತೆ ಮತ್ತು ಸಿ ಸಿ ಕ್ಯಾಮೆರಾ ಅಳವಡಿಸಬೇಕು ಮತ್ತು ಶಾಂತಿ ರೀತಿಯಿಂದ ಆಚರಣೆ ಮಾಡಬೇಕು ಅಂತ ಹೇಳಿದರು

 

ಸಭೆಯನ್ನು ಉದ್ದೇಶಿಸಿ ಠಾಣೆಯ ಸಿಪಿಐ ಗುರುಶಾಂತಗೌಡ ದಾಶ್ಯಾಳ ಅವರು ಮಾತನಾಡಿ

ಇದು ವಿಶ್ವ ಗುರು ಬಸವಣ್ಣನವರ ಜನ್ಮ ಭೂಮಿ

ಹಿಂದೂ-ಮುಸ್ಲಿಂರು ಎನ್ನುದು ಯಾವುದೇ ಜಾತಿ-ಭೇದ ಇಲ್ಲ

ಎಲ್ಲ ಬಾಂಧವರು ಶಾಂತಿ,ಸುವ್ಯವಸ್ಥೆ ಕಾಪಾಡಬೇಕಂತ ಹೇಳಿದರು

 

ಹೀಗಾಗಿ ಪ್ರತಿವರ್ಷ ನಡೆತ್ತಿರುವ ಗಣೇಶ್ ಚತುರ್ಥಿ ಈದ್ ಮಿಲಾದ್ ಹಬ್ಬವನ್ನು ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಎಲ್ಲಾ ಕಡೆ ಗಣೇಶ್ ಚತುರ್ಥಿ ಮಾಡುತ್ತಿದ್ದು

ಪಟ್ಟಣದ ಹಿರಿಯರು,ಯುವಕರು ನಮ್ಮ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಿ

ನಮ್ಮ ಇಲಾಖೆಯು ಕೂಡಾ ನಿಮ್ಮ ಜೊತೆ ಸಹಕಾರ ನೀಡುತ್ತದೆ ಅಂತ ಹೇಳಿದರು .

 

. ಇದೆ ಸಂದರ್ಭದಲ್ಲಿ ಪಟ್ಟಣದ ಹಿರಿಯರರಾದ ನೀಲು ನಾಯಕ್ ಶಂಕರಗೌಡ ಬಿರಾದಾರ್ ಅರವಿಂದ್ ಸಾಲ್ವಡ್ಗಿ ಅಶೋಕ್ ಹರಿವಾಳ ಖಾಜಂಬರ್ ನದಾಫ್ ವಿವಿಧ ಪರ ಸಂಘಟನೆ ಮುಖಂಡರು ಭಾಗವಹಿಸಿದ್ದರು.

 

ವರದಿ : ಮಹಿಬೂಬ್ ಗುಂತಕಲ್