ಮತ್ತೆ ನಾಲಿಗೆ ಹರಿ ಬಿಟ್ಟ ಯತ್ನಾಳ್ ಟಿಪ್ಪು ಸುಲ್ತಾನ್, ಔರಂಗಜೇಬ್ ವಿರುದ್ಧ ಅವಾಚ್ಯ ಪದಗಳಿಂದ ನಿಂದನೆ

ಮಹಾ ಗಣಪತಿ ವಿಸರ್ಜನೆ ವೇಳೆ ಬಹಿರಂಗ ಭಾಷಣದ ವೇಳೆ ಮತ್ತೆ ವಿಜಯಪುರ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನ ವಾಗಿ ಮಾತನಾಡಿದರು ಎಂದು ಬರೆಯುವವರು ಹಾಗೂ ಕ್ಯಾಮೆರಾ ಮಾಡೋರು ಸರಿಯಾಗಿ ಮಾಡಿ ಎನ್ನುತ್ತಲೆ ಟಿಪ್ಪುಸುಲ್ತಾನ್ ಹಾಗೂ ಔರಂಗಜೇಬ್ ರವರ ಹೆಸರು ಬಳಸಿ ಅವಾಚ್ಯ ಪದಗಳ ಬಳಕೆ ಮಾಡಿದ್ದಾರೆ, ಲಕ್ಷಾಂತರ ಹಿಂದೂ ಗಳ ಕೊಲೆ ಮಾಡಿದ್ದೂ ಟಿಪ್ಪು ಸುಲ್ತಾನ ಎನ್ನುತ್ತ ಎಷ್ಟು FIR ಹಾಕ್ತಿರಾ ನನ್ನ ಮೇಲೆ ಈಗಾಗಲೇ 36,37 FiR ಅಂತೂ ನನ್ನ ಮೇಲಿವೆ ಎಂದಿದ್ದಾರೆ ಇನ್ನು ನಾಲ್ಕೈದು ಹಾಕಿ ನಾವು ಅಂಜೊರಲ್ಲ ಹಿಂದೂಗಳು ಶೇಂಡರಲ್ಲ ಎಂದು ಸೇರಿದ ಜನರನ್ನ ಹುರಿದುಂಬಿಸಿ ಮಾತನಾಡಿದ್ದಾರೆ ಕೋರ್ಟ್ ಚಾಟಿ ಬಿಸಿದ ನಂತರವು ಶಾಸಕ ಯತ್ನಾಳ್ ಮತ್ತೆ ವಿಜಯಪುರದಲ್ಲಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ, ಒಬ್ಬ ಜನಪ್ರತಿನಿದಿ ಈ ಮಟ್ಟಕ್ಕೆ ಬಹಿರಂಗ ಭಾಷಣ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಸರ್ಕಾರ ಬಿಜೆಪಿ ಇದ್ದರು ಇದೆ ಕಥೆ ಕಾಂಗ್ರೆಸ್ ಇದ್ದರು ಇದೆ ರಾಜ್ಯದಲ್ಲಿ ದೇಶದಲ್ಲಿ ಇಂತಹ ಕೋಮುಗಲಭೆ ಸೃಷ್ಟಿಸುವವರನ್ನ ಕಡಿವಾಣ ಹಾಕೋದು ಯಾವಾಗ ಎನ್ನುವುದೇ ಜನರ ಯಕ್ಷ ಪ್ರಶ್ನೆಯಾಗಿದೆ.