ಸೆಪ್ಟೆಂಬರ್ 5ಕ್ಕೆ ಬೀದರ್ ಗೆ ಧರ್ಮಸ್ಥಳ ಧರ್ಮಾಧಿಕಾರಿಗೆ ವೀರೇಂದ್ರ ಹೆಗ್ಡೆ ಆಗಮನ ಬೃಹತ್ತಾದ ಸಭಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ

ಬೀದರ್ :  ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸೆಪ್ಟೆಂಬರ್ ಐದನೆಯ ತಾರೀಖಿನಂದು ಬೀದರ ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ ಪ್ರಯುಕ್ತ ಅಂದು ಐವತ್ತು ಸಾವಿರ ಜನ ಸೇರುವ ನಿರೀಕ್ಷೆ ಯಿದೆ ಇಂದು ಬೃಹತ್ತಾದ ಸಭಾ ಮಂಟಪದ ನಿರ್ಮಾಣ ಕಾರ್ಯಕ್ಕೆ ಇಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾದ ಅಣ್ಣ ಡಾ ರಜನೀಶ್ ವಾಲಿ ಹಾಗು ಧರ್ಮಸ್ಥಳದ ಜನಜಾಗೃತಿ ವೇದಿಕೆಯ ಅದ್ಯಕ್ಷ ವಿರೂಪಾಕ್ಷ ಗಾದಗಿ ಭೂಮಿ ಪೂಜೆ ಗುದ್ದಲಿ‌ ಪೂಜೆ ಕೈಗೊಂಡು ಸಮಾರಂಭದ ಸಿದ್ಧತೆ ಪ್ರಾರಂಭಿಸಿದರು ಈ ಸಂದರ್ಭದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಯೋಜನೆ ಯ ವಿಭಾಗೀಯ ನಿರ್ದೇಶಕ ಜಯಂತ ಕಾಯ್ಕಣಿ, ಬೀದರ್ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಯೋಜನಾಧೀಕಾರಿಗಳಾದ ಸಂಜಯ್, ಧರ್ಮೇಂದ್ರ, ಇನ್ನಿತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು