ಮಹಾವೀರ ಮೋಹಿತೆಅವರಿಂದ ಗುದ್ದಲಿ ಪೂಜೆ ಮಾಡುವುದರ ಮೂಲಕ ಭೂಮಿ ಪೂಜೆ ನೆರವೇರಿಸಿ

ರಾಯಬಾಗ : ವಿಧಾನಸಭಾ ಕ್ಷೇತ್ರದ ರಾಯಬಾಗ ಪಟ್ಟಣದಿಂದ ಚಿಂಚಲಿ ರಸ್ತೆ ಮಧ್ಯ ಇರುವ ಯಡಿ ಮಾಯಕ್ಕ ದೇವಸ್ಥಾನಕ್ಕೆ ಮಾನ್ಯ ಲೋಕಸಭಾ ಸದಸ್ಯರ ಅನುದಾನದಲ್ಲಿ ಮಂಜುರಾದ ರಸ್ತೆ, ಸಿಸಿ ಬೆಡ್ ಕಾಮಗಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಶ್ರೀ ಮಹಾವೀರ ಮೋಹಿತೆ ಅವರು ಗುದ್ದಲಿ ಪೂಜೆ ಮಾಡುವುದರ ಮೂಲಕ ಭೂಮಿ ಪೂಜೆ ನೆರವೇರಿಸಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ಇದೆ ವೇಳೆ ರಾಯಬಾಗ ಪಟ್ಟಣದ ಕಾಂಗ್ರೆಸ್ ಕಾಯಾ೯ಲಯದಲ್ಲಿ ಸಾವ೯ಜನಿಕರ ಹಲವು ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಇತ್ಯರ್ಥ ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷರಾದ ಜ್ಯೋತಿ ಕೆಂಪಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಾರೊಡ ಬಂಡಗರ ಕೆ ಡಿ ಪಿ ಸದಸ್ಯರಾದ ಶ್ರೀ ಶ್ರವನ್ ಕುಮಾರ್ ಕಾಂಬಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅರ್ಜುನ ಬಂಡಗಾರ್ ರಾಯಬಾಗ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಕಿರಣ್ ಕಾಂಬಳೆ ಆಶ್ರಯ ಸಮಿತಿ ಸದಸ್ಯರಾದ ದಿಲೀಪ ಪಾಯನ್ನವರ ರಾಜು ಮೂರಚುಟಿ ಹರುಣ ತರಡೆ ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!