ಮಿರಿಯಾಣ ಹತ್ತಿರ ಲಾರಿ ಪಲ್ಟಿ ನಾಲ್ಕು ಜನರ ಸ್ಥಿತಿ ಗಂಭೀರ

ಚಿಂಚೋಳಿ : ತಾಲೂಕಿನ ಮಿರಿಯಾಣ ಗ್ರಾಮದ ಹತ್ತಿರ ತೆಲಂಗಾಣ ರಾಜ್ಯಕ್ಕೆ ಸೇರಿದ ಪರ್ಶಿ ತುಂಬಿದ ಲಾರಿಯೊಂದು ಪಲ್ಟಿಯಾದ ಪ್ರಯುಕ್ತ ಅಂದಾಜು 11 ರಿಂದ16 ಜನರಿಗೆ ಗಂಭೀರ ಗಾಯಗೊಂಡು 4 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ

ಕೃಷ್ಣಪೂರ ಗ್ರಾಮದಿಂದ ತೆಲಂಗಾಣಕ್ಕೆ ಹೊರಟ ಪರ್ಶಿ ತುಂಬಿದ ಲಾರಿಯಲ್ಲಿ ಸುಮಾರು 11 ರಿಂದ 16 ಜನಕ್ಕಿಂತ ಹೆಚ್ಚು ಗಣಿ ಕಾರ್ಮಿಕರಿದ್ದರು ಮಿರಿಯಾಣ ಗ್ರಾಮದ ಹತ್ತಿರ ಲಾರಿ ಪಲ್ಟಿಯಾಗಿರುವುದರಿಂದ ಸುಮಾರು 4 ಜನ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ತಮ್ಮ ಸಿಬ್ಬಂದಿಗಳೊಂದಿಗೆ ಧಾವಿಸಿದ ಮಿರಿಯಾಣ ಠಾಣಾಧಿಕಾರಿ ಮಡಿವಾಳಪ್ಪ ಬಾಗೋಡಿ ತಕ್ಷಣ ಆಸ್ಪತ್ರೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಮುಖ್ಯ ವೈದ್ಯಾಧಿಕಾರಿಗಳಿಗೆ ವಿಷಯ ತಿಳಿಸಿದರು.

ಗಾಯಾಳುಗಳನ್ನು ಮೂರಕ್ಕಿಂತ ಹೆಚ್ಚು ಅಂಬುಲೆನ್ಸಗಳಲ್ಲಿ ಅಸ್ಪತ್ರೆಗೆ ತರಲಾಯಿತು ಗಾಯಾಳುಗಳನ್ನು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ತುರ್ತು ಚಿಕಿತ್ಸೆ ನೀಡಿದರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಯ ಸರಕಾರಿ ಆಸ್ಪತ್ರೆಗೆ ಟ್ರಾಮ್ ಸೆಂಟರಿಗೆ ರವಾನಿಸಲಾಯಿತು.

ಸಿಪಿಐ ಎಲ್.ಎಚ್.ಗೌಂಡಿ ಸೂಚನೆಯಂತೆ ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.