ಕಾಳಗಿ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಜನರ ಪರದಾಟ
ಕಾಳಗಿ ತಾಲೂಕಿನ ಚಿಂತಕುಂಟಾ ಗ್ರಾಮದಲ್ಲಿ ಸರಿಯಾಗಿ ನೀರಿನ ವ್ಯವಸ್ಥೆ ಇಲ್ಲ ಹಾಗೂ ಚರಂಡಿ ವ್ಯವಸ್ಥೆ ಸರಿಯಾದ ವಿದ್ಯುತ್ ಸಂಪರ್ಕವಿಲ್ಲ ಹಾಗೂ ಊರಲ್ಲಿ ಬಾವಿ ಇದ್ದರು ಕೂಡ ಯೋಗ್ಯವಲ್ಲದ ಗಲೀಜ್ ನೀರು ಹಾಗೂ ಜೆ ಜೆ ಎಮ್ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಲಗಿದ್ದು ಅನೇಕ ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಯಾವುದೇ ರೀತಿ ಸ್ಪಂದನೆ ಮಾಡಿರುವುದಿಲ್ಲ ಅದಕ್ಕಾಗಿ ಜನರು ಬೇಸತ್ತು ನವದಾಗಿ ಕ್ರಾಸ್ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು,
ಈ ಸಂಧರ್ಭದಲ್ಲಿ ಮಾರುತಿ ಗಂಜಗಿರಿ
ಭಾರತ್ ಮುಕ್ತಿ ಮೋರ್ಚಾ ರಾಜ್ಯ ಕಾರ್ಯದರ್ಶಿ, ಶರಣಪ್ಪ ಜಾಪಟ್ಟಿ ವಕೀಲರು ಗೋಪಾಲ ಗಾರಂಪಳ್ಳಿ, ಶೇಖರ್ ನಾಟಿಕಾರ್,ಸೂರ್ಯಕಾಂತ್ ಶರ್ಮಾ ಚಿಂತಕುಂಟಾ ಗ್ರಾಮಸ್ಥರು ಮಹಿಳೆಯರು ಯುವಕರು ಭಾಗಿಯಾಗಿದ್ದರು ಪೊಲೀಸರು ಇದ್ದರು.
ವರದಿ ರಮೇಶ್ ಎಸ್ ಕುಡಹಳ್ಳಿ