ಶಶಿಕಲಾ ಜೊಲ್ಲೆ ಅವರಿಂದ ಅಮರ ಮಧುರ ಪ್ರೇಮ’ಹೊಸ ನಾಟಕ ವೀಕ್ಷಣೆ

ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ‘ಅಮರ ಮಧುರ ಪ್ರೇಮ’ಹೊಸ ನಾಟಕ ಡಾ.ಯಶವಂತ ಸರದೇಶಪಾಂಡೆ ಜಿ ನಿರ್ದೇಶನದ ನಾಟಕಕ್ಕೆ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಚಿಕ್ಕೋಡಿ ಲೋಕಸಭೆ ಮಾಜಿ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಶ್ರೀ. ಜ್ಯೋತಿಪ್ರಸಾದ ಜೊಲ್ಲೆ ಸೌ. ಪ್ರಿಯಾ ಜೊಲ್ಲೆ ಹಾಗೂ *ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. ಬಸವಪ್ರಸಾದ ಜೊಲ್ಲೆ ಯವರು ಚಾಲನೆ ನೀಡಿ,ಸುಂದರ ಕನ್ನಡ ನಗೆ ನಾಟಕವನ್ನು ವೀಕ್ಷಿಸಿದರು.

‘ಅಮರ ಮಧುರ ಪ್ರೇಮ’ನಾಟಕದಲ್ಲಿ ವಯಸ್ಸು ಎಷ್ಟೇ ಆಗಲಿ ಮನುಷ್ಯನಿಗೆ ಬಾಳಸಂಗಾತಿ ಬೇಕೇ ಬೇಕು… ಅದರಲ್ಲೂ ತಾನು ಪ್ರೀತಿಸುವ ಸಂಗಾತಿಗಾಗಿ ಏನೂ ಬೇಕಾದರೂ ಮಾಡುತ್ತಾನೆ. ರಂಗದ ಮೇಲೆ ಕಾಣಿಸಿಕೊಂಡ ಮೂರು ಪಾತ್ರಗಳು ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ಅಭಿನಯಿಸಿ ಹೊಸತನದ ‘ಅಮರ ಮಧುರ ಪ್ರೇಮ’ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು. ಪ್ರತಿಯೊಬ್ಬ ಪ್ರೇಕ್ಷಕರನ್ನು ನಗುವಿನ ಅಲೆಯಲ್ಲಿ ತೇಲಿಸಿದರು. ನಾಟಕದ ಒಂದೊಂದು ಪಾತ್ರವೂ ಪ್ರತಿ ಪ್ರೇಕ್ಷಕನ ಹೃದಯ ಮುಟ್ಟಿದವು. ಈ ನಾಟಕವು ಮನುಷ್ಯನಿಗೆ ಎಷ್ಟೇ ಕಷ್ಟ ದುಃಖ ಬಂದರು ಅದನ್ನು ಹಂಚಿಕೊಳ್ಳಲು ಬಾಳಸಂಗಾತಿ ಬೇಕು ಎನ್ನುವ ಸಂದೇಶ ಸಾರಿದ ಸುಂದರ ನಾಟಕ.

ಈ ಸಂದರ್ಭದಲ್ಲಿ ಹಾಲಸಿದ್ದನಾಥ ಮತ್ತು ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು,ಉಪಾಧ್ಯಕ್ಷರು,ನಿರ್ದೇಶಕರು,ಜೊಲ್ಲೆ ಗ್ರೂಪ್ ನ ಎಲ್ಲ ಅಂಗ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು, ಜೊಲ್ಲೆ ಪರಿವಾರದ ಹಿತೈಷಿಗಳು, ಸಂಸ್ಥೆಯ ಪದಾಧಿಕಾರಿಗಳು ದಂಪತಿ ಸಮೇತ ಉಪಸ್ಥಿತರಿದ್ದರು

error: Content is protected !!