ಚಿಂಚೋಳಿ ಪಟ್ಟಣದ ನ್ಯಾಯಾಲಯ ಕಾರ್ಯಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಜ್ಯೋತಿ ಶಾಂತಪ್ಪ ಕಾಳೆ ರವರ ಬೀಳ್ಕೊಡುಗೆ ಸಮಾರಂಭದಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ರಾಜೇಂದ್ರ ಪ್ರಸಾದ ತಾಲೂಕ ಅಧ್ಯಕ್ಷ ಅನಿಲ ಬಿರಾದಾರ, ಉಪಾಧ್ಯಕ್ಷರಾದ ಚಾಂದ, ಕಾರ್ಯದರ್ಶಿ ಸೂರ್ಯಕಾಂತ ಗಾರಂಪಳ್ಳಿ ಹಾಗೂ ಇತರರು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ)ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಶಾಂತ. ಬಿ, ವಕೀಲ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ವಕೀಲರಾದ ಶಿವಶರಣಪ್ಪ ಜಾಪಟ್ಟಿ,
ರಾಜಕುಮಾರ ನೀಲಕಂಟ ರಾಠೋಡ, ಇನ್ನು ಹಲವಾರು ವಕೀಲರು,ಹಾಗೂ ಇತರರು ಉಪಸ್ಥಿತರಿದ್ದರು.