ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆ ವಿಜೃಂಭಣೆಯಿಂದ ಆಚರಣೆ

ರಾಯಚುರು : ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆ ಖಾಯಂ ಶುಶ್ರೂಷಾಧಿಕಾರಿಗಳ ಸಂಘ (ರಿ),ಆರೋಗ್ಯ ಇಲಾಖೆ, ಸ್ಟೈಫೆಂಡರಿ ಹಾಗೂ ಎನ್. ಎಚ್.ಎಮ್,ಹೊರ ಗುತ್ತಿಗೆ ಶುಶ್ರುಷಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ದೀಪ ಧಾರಣೆ ಫ್ಲೋರೆನ್ಸ್ ನೈಟಿಂಗೇಲ್ ಜನ್ಮ ದಿನೋತ್ಸವ ಹಾಗೂ ಅಂತರಾಷ್ಟ್ರೀಯ ಶುಶ್ರೂಷಾಧಿಕಾರಿಗಳ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.

ದೀಪಧಾರಣೆ ಫ್ಲೋರೆನ್ಸ್ ನೈಟಿoಗೇಲ್ ಜನ್ಮದಿನೋತ್ಸವ ದಿನದಂದು ಹಮ್ಮಿಕೊಳ್ಳಲಾಗಿದ್ದ .ಈ ಕಾರ್ಯಕ್ರಮಕ್ಕೆ ಗೌರವಾನ್ವಿತ ಮುಖ್ಯ ಉದ್ಘಾಟಕರಾಗಿ ಸನ್ಮಾನ್ಯ ಡಾ//ಅರವಿಂದ ಸಂಗವಿ ಡೆಪ್ಯುಟಿ ಮೆಡಿಕಲ್ ಸೂಪರಿಡೆಂಟ್ ಹಾಗೂ ಎನ್ ಎಮ್ ಸಿ ಕೋರ್ಡಿನೇಟರ್ ರಿಮ್ಸ್ ಆಸ್ಪತ್ರೆ ರಾಯಚೂರು ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಜಯಕೃಷ್ಣ ಸರ್ ಶುಶೃೂಷಕ ಅಧೀಕ್ಷಕರು ರಿಮ್ಸ್ ಬೋಧಕ ಆಸ್ಪತ್ರೆ ದೀಪ ಧಾರಣೆ ಫ್ಲೋರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ವೇದಿಕೆಯ ಮೇಲೆ ಆಶೀನರಾಗಿರುವ ಅತಿಥಿ ಮಹನೀಯರು ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿ ಜನ್ಮ ದಿನೋತ್ಸವ ಆಚರಣೆ ಮಾಡಿದರು.

ಗೌರವಾನ್ವಿತ ಉದ್ಘಾಟಕರಾಗಿ ಆಗಮಿಸಿದ ಶ್ರೀ ಅರವಿಂದ ಸಂಗವಿ ಸರ್ ಅವರು ಮಾತನಾಡಿ ಶುಶ್ರೂಷಕ ಅಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಸೇವೆ ಎಂದು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಬಸವರಾಜ ಎಂ ಪಾಟೀಲ ಸರ್ ಪ್ರಾಂಶುಪಾಲರು, ಮೆಡಿಸಿನ್ HOD ಸರ್ ಮಾತನಾಡಿ ಶುಶ್ರೂಷಕ ಅಧಿಕಾರಿಗಳು ಆಸ್ಪತ್ರೆಯ ಬೆನ್ನೆಲುಬು, ಶುಶ್ರೂಷಕರು ಇಲ್ಲದಿದ್ದರೆ ಯಾವ ಆಸ್ಪತ್ರೆ ನಡೆಸಲು ಸಾಧ್ಯವಿಲ್ಲ, ಆಸ್ಪತ್ರೆಯಲ್ಲಿ ಇವರ ಪಾತ್ರ ಅಮೋಘವಾದುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಹನುಮೇಶ ನಾಯಕ ಸರ್ ಆರ್ಥಿಕ ಸಲಹೆಗಾರರು ಮಾತನಾಡಿ ಫ್ಲೋರೆನ್ಸ್ ನೈಟಿಂಗೇಲ್ ಅವರ ವೃತ್ತಿ ಶ್ರೀಮಂತ ಸೇವೆ ಹಾಗೂ ಒಂಭತ್ತು ತಿಂಗಳು ತಾಯಿ ಗರ್ಭದಲ್ಲಿ ಹುಟ್ಟಿ ಬೆಳಿಸಿದ ಮಹಾ ತಾಯಿಯ ಸೇವೆ ಬಹಳ ಮುಖ್ಯವಾಗಿದೆ. ತಾಯಿಯ ಮಮತೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಾಮಣ್ಣ ಮಾಚನೂರು ಸ್ಥಾನಿಕ ವೈದ್ಯಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಮಾತನಾಡಿ ಹಗಲಿರುಳೆನ್ನದೆ ಅವಿರತವಾಗಿ ಶ್ರಮಿಸುತ್ತಿರುವ ಶುಶ್ರೂಷಕರ ಪಾತ್ರ ಮಹತ್ವದ್ದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಬುಳ್ಳಪ್ಪ ನಾಯಕ ರಿಮ್ಸ್ ಶುಶ್ರೂಷಕ ಸಂಘದ ಅಧ್ಯಕ್ಷರು ಮಾತನಾಡಿ ಶುಶ್ರೂಷಕರ ಹಲವಾರು ವರ್ಷಗಳ ಬೇಡಿಗಳ ಬಗ್ಗೆ ಮತ್ತು ಪ್ರತಿಯೊಬ್ಬರ ಏಳಿಗೆಗೆ ಸದಾ ಸನ್ನದ್ಧನಾಗಿರುತ್ತೇನೆ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಯಕೃಷ್ಣ ಸರ್ ಅವರು ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಆಸ್ಪತ್ರೆ ಮುಂಚೂಣಿಯಲ್ಲಿದೆ ನಿಮ್ಮ ಸಲಹೆ ಸಹಕಾರ ಪ್ರೋತ್ಸಾಹ ನೀಡಿದರೆ ಶುಶ್ರೂಷಕ ಬಾಂಧವರು ಅವಿರತವಾಗಿ ಶ್ರಮಿಸಿ ಕಾಯಕಯೋಗಿ ಗಳಾಗಿ ಶ್ರಮಿಸುತ್ತಾರೆ.ಇನ್ನೂ ಹೆಚ್ಚು ಹೆಚ್ಚು ಶುಶ್ರೂಷಾ ಅಧಿಕಾರಿಗಳನ್ನು ನೇಮಕ ಮಾಡಿ ಸರ್ ಎಂದು ಮಾತನಾಡಿದರು.

ಈ ವೇದಿಕೆಯ ಮೇಲೆ ಡಾ.ಮಂಜುನಾಥ ಸರ್ ಪ್ರಭಾರಿ ಪ್ರಾಂಶುಪಾಲರು, ಶ್ರೀ ಸೋಮಶೇಖರ ಕಾಶೆಟ್ಟಿ ಸಹಾಯಕ ಶುಶ್ರೂಷಕ ಅಧೀಕ್ಷಕರು, ಶ್ರೀ ಶ್ರೀ ಶೈಲ ಶಂಕರ ಶೆಟ್ಟಿ ಪ್ರಾಂಶುಪಾಲರು ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯ, ಡಾ.ಸುನಿಲ್ ಕೊಹಿನೂರ್ ಸರ್ ವೇದಿಕೆಯ ಮೇಲೆ ಮತನಾಡಿ ಉಪಸ್ಥಿತರಿದ್ದರು.

ಈ ಕಾರ್ಯಮವನ್ನು ಪ್ರಾರ್ಥನೆ ಗೀತೆಯೊಂದಿಗೆ ಶ್ರೀ ಮತಿ ಮಹಾದೇವಿ ಮೇಡಂ ಮತ್ತು ವಿಜಯ ಕುಮಾರ ಸರ್ ಹಾಡಿದರು.ಸ್ವಾಗತ ಭಾಷಣವನ್ನು ಶ್ರೀ ಅಮರೇಶ ಪ್ರಧಾನ ಕಾರ್ಯದರ್ಶಿ ರಿಮ್ಸ್,ಶುಶ್ರೂಷಕ ಅಧಿಕಾರಿ ನೆರವೇರಿಸಿದರು.ನಿರೂಪಣೆ ಕಾರ್ಯಕ್ರಮವನ್ನು ಶ್ರೀ ಮತಿ ಸುಜಾತ.A. V.ಮೇಡಂ ಮತ್ತು ಶ್ರೀ ಶಿವರಾಜ ರಾಯಪ್ಪ ನೆರವೇರಿಸಿದರು. ಈ ಕಾರ್ಯಕ್ರಮದ ಆಯೋಜಕರು ಮತ್ತು ವಂದನಾರ್ಪಣೆ ಕಾರ್ಯಕ್ರಮವನ್ನು ಶ್ರೀ ರಾಚೋಟಿ ವಾರದ ಸರ್ ನಡೆಸಿಕೊಟ್ಟರು. ರಿಮ್ಸ್ ಶುಶ್ರೂಷಕ ಸಂಘದ ಉಪಾಧ್ಯಕರು,ಖಜಾಂಚಿ, ಸರ್ವ ಸದಸ್ಯರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಶುಶ್ರೂಷಕ ಮೇಲ್ವಿಚಾರಕರು, ಶುಶ್ರೂಷಕ/ಕಿ ಅಧಿಕಾರಿಗಳು, ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯ ವಿಧ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ತಿತರಿದ್ದರು.

error: Content is protected !!