ಮುಗಳಕೋಡ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸತೀಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ನಿಪನಾಳ, ಇಟನಾಳ, ಮುಗಳಖೋಡ ಗ್ರಾಮದಲ್ಲಿ ಹರಿಯುವ ಘಟಪ್ರಭಾ ಎಡದಂಡೆ ಕಾಲುವೆ ನೀರನ್ನು ವೀಕ್ಷಿಸಿ
ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಿ, ರೈತರ ಭಾವ ಭವಣಿಯನ್ನು ದೂರ ಮಾಡಿದ್ದಾರೆ. ರೈತರು ಕುಡಿಯುವ ನೀರು ಹಾಗೂ ಜನ ಜಾನುವಾರಗಳಿಗೆ ಸಮರ್ಪಕವಾಗಿ ನೀರನ್ನು ಉಪಯೋಗಿಸಬೇಕೆಂದು ಹೇಳಿದರು.
ಮುಗುಳಖೋಡ ಜೆ.ಎಲ್.ಬಿ.ಸಿ ಯಿಂದ ಯಬರಟ್ಟಿ,ಶಪ ರಾಯಬಾಗ್ ಉಪಕಾಲುವೆಗೆ ಹರಿಸುವ ನೀರಿನ ಪ್ರಮಾಣವನ್ನು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಶಿವನಗೌಡ ಪಾಟೀಲ, ಎಂ.ಬಿ.ಸಾಯಣ್ಣವರ, ಕಂಕಣವಾಡಿ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಮೋಹನಕುಮಾರ, ಕಾಂಗ್ರೆಸ್ ಪಕ್ಷದ ನಾಗರಮುನ್ನೊಳಿ ಬ್ಲಾಕ್ ಅಧ್ಯಕ್ಷ ಪುಟ್ಟು ಪಾಟೀಲ, ಅರ್ಜುನ ನಾಯಿಕವಾಡಿ, ಶಿವಪ್ಪ ಶಿವಾಪುರೆ, ಅಶೋಕ ಕೊಪ್ಪದ, ಆನಂದ ತುಳಜವ್ವಗೋಳ, ಅಶೋಕ ಕದಂ, ಆನಂದ ಬರಮಪ್ಪಗೋಳ, ಪವನ್ ಕರಿಭೀಮಗೋಳ, ನೀಲಪ್ಪ ಸಂದಿರಿಮನಿ ಇತರರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ