ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಭೀಕರ ಕೊಲೆ ಕೊಲೆಯಾದ ವ್ಯಕ್ತಿಯ ಹೆಸರು ಗುರಪ್ಪ ತಂದೆ ತಿಪ್ಪಣ್ಣ ವಯಸ್ಸು 30 ಕೊಲೆಯು ಮಧ್ಯರಾತ್ರಿ 1 ಅಥವಾ 2 ಗಂಟೆಯ ಸುಮಾರಿಗೆ ಕೊಲೆ ನೆಡದಿದೆ ಎನ್ನಲಾಗಿದೆ,
ಕೊಲೆಯಾದ ವ್ಯಕ್ತಿಯ ದೇಹವನ್ನು ಬೇರೆ ಸ್ಥಳಕ್ಕೆ ಅಂದ್ರೆ ಮನೆಯ ಸ್ವಲ್ಪ ದೂರದಲ್ಲಿ ಇದ್ದ ಪಾಳು ಬಿದ್ದ ಮನೆಯಲ್ಲಿ ಎಸೆದಿದ್ದರು ಸಂಶಯ ಬಂದ ಗ್ರಾಮಸ್ಥರು ನೋಡಿ ಕೆಂಭಾವಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ,
ಮಾಹಿತಿಯನ್ನು ಆದರಿಸಿ ಸ್ಥಳಕ್ಕೆ ಧಾವಿಸಿದ ಯಾದಗಿರಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧಿಕಾರಿಯಾದ ದರ್ಣೇಶ ಡಿವೈಎಸ್ಪಿ ಯಾದ ಜಾವಿದ ಇನಾಂದಾರ್ ಹಾಗೂ ಸಿಪಿಐ ಆದ ರವಿಕುಮಾರ ನಾಯಿಕೊಡಿ ಹಾಗೂ ಕೆಂಬಾವಿ ಪೊಲೀಸ್ ಠಾಣೆಯ ಪಿಎಸ್ಐ ಆದಂತ ಅಮೋಜ ಕಾಂಬಳೆ ಮತ್ತು ಅಪರಾಧ ವಿಭಾಗದ ಪಿಎಸ್ಐ ಮತ್ತು ಸಿಬ್ಬಂದಿ ಅವರು ಸ್ಥಳಕ್ಕೆ ಭೇಟಿಕೊಟ್ಟು ಪರೀಶೀಲನೆ ನಡೆಸಿದ್ದಾರೆ ಹಾಗೂ ಆರೋಪಿಗಳನ್ನು ವಿಚಾರಣೆಗೆಂದು ಸಂಬಂಧಪಟ್ಟ ಕೆಂಭಾವಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಕೊಲೆಗೆ ಸಂಬಂಧಪಟ್ಟ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ ಅಂತ ಕೆಂಬಾವಿ ಪೋಲಿಸ್ ಠಾಣೆಯ ಪಿಎಸ್ಐ ಅಮೊಜ ಕಾಂಬಳೆ ತಿಳಿಸಿದ್ದಾರೆ
ವರದಿ : ಸಿಎಂ ಮಕಾಂದಾರ್