ಲೋಕಾಪೂರ ದಿಂದ ಧಾರವಾಡಕ್ಕೆ ರೈಲ್ವೆ ಮಾರ್ಗಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಜಗದೀಶ ಶೆಟ್ಟರ

ರಾಮದುರ್ಗ :ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ರಾಮದುರ್ಗ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸತ್ ಸದಸ್ಯರಾದ ಶ್ರೀ ಜಗದೀಶ ಶೆಟ್ಟರ್ ಅವರು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುವೆ. ಅದೇ ರೀತಿ ಲೋಕಾಪೂರದಿಂದ ಧಾರವಾಡದವರೆಗಿನ ರೈಲ್ವೆ ಮಾರ್ಗಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ರಾಮದುರ್ಗ ತಾಲೂಕಿನ ಜನತೆಗೆ ಭರವಸೆ ನೀಡಿದರು.

ಮಾನ್ಯ ಸಂಸತ್ ಸದಸ್ಯರಾದ ಜಗದೀಶ ಶೆಟ್ಟರ್ ಅವರಿಗೆ ಭೇಟಿಯಾದ ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಪ್ರಮುಖರು ರಾಜ್ಯದ ರೈಲ್ವೆ ಮಾರ್ಗದ ಕುರಿತು ಮಾಹಿತಿ ನೀಡಿ ಅವರ ಜೊತೆ ಚರ್ಚಿಸಿದರು. ಸಮಿತಿಯ ಪ್ರಮುಖರ ಜೊತೆ ಮಾತನಾಡಿದ ಜಗದೀಶ ಶೆಟ್ಟರ್ ರವರು ಈಗಾಗಲೇ ಸವದತ್ತಿ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರವಾಗಿದ್ದು, ಕೇಂದ್ರದಿಂದ ರೂ 100 ಕೋಟಿ ರೂಪಾಯಿ ಮಂಜೂರ ಮಾಡಿಸಿದ್ದು, ಇದನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿ ಆಗಲಿದೆ. ಇಲ್ಲಿ ಬರುವ ಕೋಟ್ಯಾಂತರ ಭಕ್ತರಿಗೆ ರೈಲ್ವೆಯ ಅವಶ್ಯಕತೆ ತುಂಬಾ ಇರುವುದರಿಂದ ರೈಲ್ವೆ ಕೇಂದ್ರ ಸಚಿವರಾದ ಮಾನ್ಯ ಅಶ್ವಿನ್ ವೈಷ್ಣವಿ ರವರಿಗೆ ಭೇಟಿಯಾಗಿ ಲೋಕಾಪೂರದಿಂದ ಧಾರವಾಡವರೆಗಿನ ರೈಲ್ವೆ ಮಾರ್ಗದ ಕುರಿತು ಮನವರಿಕೆ ಮಾಡಲಾಗಿದೆ. ಇದರ ಭಾಗವಾಗಿ ಕೇಂದ್ರ ರೈಲ್ವೆ ಸಚಿವರು 2019 ರಲ್ಲಿ ಆಗಿರುವ ಸರ್ವೆಯನ್ನು ಇನ್ನೊಮ್ಮೆ ಮಾಡಬೇಕೆಂದು ಈಗಾಗಲೇ ರೈಲ್ವೆ ಬೋರ್ಡಗೆ ಪತ್ರ ನೀಡಿದ್ದಾರೆ. ಇದು ನಮ್ಮೆಲ್ಲರಿಗೂ ಸಂತೋಷವಾಗಿದೆ. ಆದರೂ ಲೋಕಾಪೂರದಿಂದ ಧಾರವಾಡದವರೆಗಿನ ರೈಲ್ವೆ ಮಾರ್ಗಕ್ಕಾಗಿ ಸಚಿವರ ಜೊತೆ ಇನ್ನೊಮ್ಮೆ ಮಾತನಾಡಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಕ್ರಿಯಾ ಸಮಿತಿಯ ಮುಖಂಡರಾದ ಮಲ್ಲಣ್ಣ ಯಾದವಾಡ, ಜಿ. ಎಂ. ಜೈನೆಖಾನ, ಮಮ್ಮದ ಶಫೀ ಬೆಣ್ಣೆ, ಎಂ. ಕೆ. ಯಾದವಾಡ ಮತ್ತು ದಾದಾಪೀರ ಹಾಜಿ, ದಾದಾಪೀರ್ ಕೆರೂರ
ಉಪಸ್ಥಿತರಿದ್ದರು.

ವರದಿ : Md ಸೋಹಿಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ

error: Content is protected !!