ರಾಯಚೂರು : ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಫಲಿತಾಂಶಗಳು ಕಡಿಮೆ ಬರಲು ಶಿಕ್ಷಣಾಧಿಕಾರೇ ಕಾರಣ ಅವರನ್ನೇ ನೇರ ಜವಬ್ದಾರರನ್ನಾಗಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಯಾದ ಮುಜಾಹಿದ ಮರ್ಚೆಡ್ ಜಿಲ್ಲಾಧದಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಶಾಲೆಗಳು ಪ್ರಾರಂಭವಾಗಿವೆ ಆದರೆ ಶಾಲೆಗಳಿಗೆ ಎಲ್ಲಾ ಶಿಕ್ಷಕರು ಹಾಜರಾಗುತ್ತಿಲ್ಲ ಆದ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಬಂದ ಶಿಕ್ಷಕರು ಸಮಯಕ್ಕಿಂತ ಮುಂಚೆಯೆ ಶಾಲೆ ಮುಚ್ಚಿ ಮನೆಗಳಿಗೆ ಹೋಗುತಿದ್ದಾರೆ, ಇನ್ನೊಂದ ಕಡೆ ಖಾಸಾಗಿ ಶಾಲೆಯವರು ಪಟ್ಯಪುಸ್ತಕ, ಸಮವಸ್ತ್ರ , ಶುಲ್ಕವನ್ನು ಕಟ್ಟಲು ಪಾಲಕ ಪೋಷಕರ ಮೇಲೆ ಒತ್ತಡ ಹೇರುತಿದ್ದಾರೆ.
ಬಿ.ಇ.ಒ.ಹಾಗೂ ಡಿ.ಡಿ.ಪಿ.ಐ.ಗಳ ಶಾಲೆಗಳು ಪ್ರಾರಂಭ ಆದರೂ ಶಾಲೆಗಳ ಸ್ಥಿತಿಗತಿ ನೋಡಲು ಶಾಲೆಗಳ ಬೇಟಿ ಇಲ್ಲ ಶಿಕ್ಷಕರ ಮೇಲೆ ಕ್ರಮವಿಲ್ಲ, ಶಿಕ್ಷಣ ಮಟ್ಟ ಸುಧಾರಣೆಗೆ ಕಿಂಚಿತ್ತು ಆಸಕ್ತಿ ಇಲ್ಲದ ಅಧಿಕಾರಿಗಳ ಕರ್ತವ್ಯ ನಿರ್ವಹಿಸುತಿದ್ದಾರೆ ಅಂತಹವರ ಮೇಲೆ ಜಿಲ್ಲಾಡಳಿತ ತಕ್ಷಣ ಕ್ರಮ ತೆಗೆದುಕೊಳ್ಳಲು ದೇವಸೂಗೂರು ಅಲ್ಪ ಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಸಮೀತಿ ಕಾರ್ಯದರ್ಶಿ ಮುಜಾಹಿದ್ ಮರ್ಚೆಡ್ ಒತ್ತಾಯಿಸಿದ್ದಾರೆ.