ರೋಟರಿ ಸಿಲ್ವರ್ ಸ್ಟಾರ್ ವತಿಯಿಂದ ಈ ಅರ್ಥಪೂರ್ಣ ಕಾರ್ಯಕ್ರಮ । ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು

ಬೀದರ್ ಜಿಲ್ಲೆಯಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಲ್ಲಿ ರೋಟರಿ ಸಿಲ್ವರ್ ಸ್ಟಾರ್ ವತಿಯಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ರೋಟರಿ ಕ್ಲಬ್‌ ಆಫ್‌ ಬೀದರ್‌ ಸಿಲ್ವರ್‌ ಸ್ಟಾರ್ಸ್‌,ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಎಫ್‌ ಪಿ ಎ ಇಂಡಿಯಾ ಇವರ ಸಹಯೋಗದಲ್ಲಿ ಕ್ಯಾನ್ಸರ್‌ ಯೋಧರಿಗೆ ಮತ್ತೊಂದು ಅವಕಾಶ ಎಂಬ ಹೆಸರಿನಲ್ಲಿ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಶಿಬಿರವನ್ನು ನಗರದ ಯುಪಿಹೆಚ್‌ ಸಿ ಬಿದ್ರಿ ಕಾಲೋನಿಯಲ್ಲಿ ಅಯೋಜಿಸಲಾಗಿದ್ದು.ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು, ಉಚಿತ ತಪಾಸಣೆಯ ಅವಕಾಶ ನೀಡುವುದು ಮತ್ತು ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಒದಗಿಸುವುದು ಶಿಬಿರದ ಮುಖ್ಯ ಉದ್ದೇಶವಾಗಿದ್ದು, ಇಂದಿನಿಂದ ಮೂವತ್ತು ದಿನಗಳ ಕಾಲ ಬೀದರ್ ಜಿಲ್ಲೆಯ ವಿವಿಧ ಊರುಗಳಿಗೆ ಈ ಕ್ಯಾನ್ಸರ್ ಸ್ಕ್ರೀನಿಂಗ್ ವಾಹನ ಸಂಚರಿಸಿ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡಲಿದೆ.ಹಾಗೂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೌರಾಡಳಿತ ಸಚಿವ ರಹೀಂ ಖಾನ್, ಬೀದರ್ ನ ಯುವ ಮನಸ್ಸುಗಳೆಲ್ಲ ರೋಟರಿ ಕ್ಲಬ್ ಸಿಲ್ವರ್ ಸ್ಟಾರ್ ಮೂಲಕ ಕೇವಲ ಒಂದು ವರ್ಷದಲ್ಲಿ ಸಾಕಷ್ಟು ಸಮಾಜ ಸುಧಾರಣಾ ಕೆಲಸಗಳನ್ನು ಮಾಡಿದ್ದಾರೆ. ಅವರ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು, ರೋಟರಿ ಸಿಲ್ವರ್ ಸ್ಟಾರ್ ಕಾರ್ಯವನ್ನು ನೋಡಿದರೆ ನಮಗೆ ಹೆಮ್ಮೆಯಾಗುತ್ತದೆ.ನಿಮ್ಮ ಈ ಕಾರ್ಯವನ್ನು ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ಜೊತೆಗೂಡಿ ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದು ಇಂತಹ ಉತ್ತಮ ಕಾರ್ಯಕ್ಕೆ ಸರ್ಕಾರದಿಂದ ಸಹಾಯಹಸ್ತ ನೀಡುವ ಕೆಲಸವನ್ನು ನಾನು ಮಾಡುತ್ತೇನೆ.
ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಜನಗಳು ಜಗಳವಾಡುತ್ತಿರುವ ಕಾಲಘಟ್ಟದಲ್ಲಿ ಸಮಾಜದ ಸುಖ, ಶಾಂತಿ, ಸಮೃದ್ಧಿಗಾಗಿ ನೀವು ಮಾಡುತ್ತಿರುವ ಕಾರ್ಯ ಹೀಗೆ ಮುಂದುವರೆಯಲಿ ಎಂದರು.ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಪುನೀತ್ ಸಿಂಗ್ ಮಾತನಾಡಿ, ಬೀದರ್ ನ ಬಿದ್ರಿ ಕಾಲೋನಿಯ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ರೋಗದ ಪತ್ತೆಗಾಗಿ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ತಪಾಸಣೆ ನಂತರ ಅವಶ್ಯಕತೆ ಇರುವ 50 ಜನರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದೇವೆ ಎಂದರು. ಕ್ಲಬ್ ಉಪಾಧ್ಯಕ್ಷ ಆದೀಶ್ ವಾಲಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಲ್ಲಿ ರೋಟರಿ ಸಿಲ್ವರ್ ಸ್ಟಾರ್ ವತಿಯಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಸಿದ್ಧ ವೈದ್ಯರಿಂದ ಇಲ್ಲಿ ಬಂದಂತಹ ಮಹಿಳೆಯಾರಿಗೆ ಉಚಿತವಾಗಿ ತಪಾಸಣೆ ನಡೆಸಿ, ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು. ಕ್ಲಬ್ ನ ನಿರ್ದೇಶಕಿ ಸಹನಾ ಪಾಟೀಲ್ ಕಾರ್ಯಕ್ರಮದ ನಿರೂಪಣೆ ನಡೆಸಿದರು.ಈ ವೇಳೆ ಎಫ್.ಪಿ.ಎ.ಐ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಡಾ.ದೀಪಕ್ ಕೊಂಡಾ, ಐ.ಎಮ್.ಎ ಅಧ್ಯಕ್ಷೆ ಸರಿತಾ ಭದಬದೆ, ರೋಟರಿ ಕಲ್ಯಾಣ ವಲಯದ ಅಸಿಸ್ಟೆಂಟ್ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಪುನೀತ್ ಸಿಂಗ್ , ಉಪಾಧ್ಯಕ್ಷ ಆದೀಶ್ ವಾಲಿ, ಡಾ.ಸಂಗಮೇಶ ವಡಗಾವೇ,ಜಂಟಿ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ, ಖಜಾಂಚಿ ಅಮಯ್ ಸಿಂಧೋಲ್,ಪೂಜಾ ಕೊಂಡಿ,ಮಂಜುನಾಥ ಹೂಗಾರ,ಕೀರ್ತಿ ವಾಲೆ,ಭಾವೇಶ ಪಟೇಲ್‌,ಅನಂದ ಕುಲಕರ್ಣಿ,ಗುರು ಸಿಂಧೋಲ್‌,ನವೀನ್‌ ಗೋಯಲ್‌,ಮಹೇಶ್‌ ಚಿಮಕೋಡೆ,ಶಿವರುದ್ದ ಗಂಗಶೆಟ್ಟಿ,ನಿಖಿಲ್‌,ಕಿರಣ ಸ್ಯಾಮುವೇಲ್‌,ಮಂಜುನಾಥ ಖೂಬಾ,ಅನಂದ ಕೋಟರ್ಕಿ,ಕೃಷ್ಣ ಪರ್ಸಗೆ,ಅಖಿಲೇಶ್‌ ಬಿರಾದರ,ಅರವಿಂದ ಪಾಟೀಲ್‌,ರಾಘವೇಂದ್ರ ರೇಜಿಂತಲ್‌ ,ಬಸವಕುಮಾರ,ಪ್ರಸನ್ನ ಸಿಂಧೋಲ್‌ ಮತ್ತು ಹರ್ಷಿತ ಪಾಟೀಲ್‌ ಸೇರಿದಂತೆ ಹಲವರು ಉಪಸ್ಥಿರರಿದ್ದರು.

error: Content is protected !!