ಕಾಳಗಿ: ಪಟ್ಟಣದ ಪುರಾತನ ದೇವಸ್ಥಾನ ಆದಿಶಕ್ತಿ ಬನಶಂಕರಿ ದೇವಿಯ ಕೊರಳಲಿದ್ದ ಚಿನ್ನದ ತಾಳಿ ಕಳ್ಳತನ ಹಾಗೂ ಹುಳಗೇರಾ ಸೋಮೇಶ್ವರ ಮೂರ್ತಿ, ರೈತಮ ಸಾಗುವಾನಿರ ಕಳ್ಳತನ ಪ್ರಕರಣದ ಪ್ರಕರಣದ ಬೆನ್ನಲ್ಲೇ ತಾಲೂಕಿನಾದ್ಯಂತ ಸಂಚರಿಸಿ ಘಟನಾ ಸ್ಥಳವನ್ನು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಸೋಮವಾರ ಪರಿಶಿಲನೆ ಮಾಡಿದರು.
ನಂತರ ಸುದ್ದಿಗಾರರದಿಗೆ ಮಾತನಾಡಿದ ಡಿವೈಎಸ್ಪಿ ಪಾಟೀಲ, ಕಳ್ಳರ ಜಾಲ ಪತ್ತೆಗೆ ಶೋಧನೆ ಕಾರ್ಯ ಮುಂದುವರೆದಿದೆ. ದೇವಸ್ಥಾನ ಹಾಗೂ ಮೂರ್ತಿ ಗುರಿಯಾಗಿಸಿಕೊಂಡು ಕಳ್ಳತನ ಕೃತ್ಯ ಮಾಡುತ್ತಿದ್ದಾರೆ. ‘ಆರೋಪಿಗಳ ಪತ್ತೆಗೆ ಪ್ರಯತ್ನಿಸುತ್ತೇವೆ. ಮಾಹಿತಿ ಸಿಕ್ಕಲ್ಲಿ ಪಿಎಸ್ಐ ಗಮನಕ್ಕೆ ತನ್ನಿರಿ’ ಎಲ್ಲರ ಸಮಕ್ಷೇಮದಲ್ಲಿ ಸೂಚಿಸಿದರು. ಸಿಪಿಐ ಜಗದೇವಪ್ಪ ಪಾಳಾ, ಪಿಎಸ್ಐ ತಿಮ್ಮಯ್ಯ ಬಿ.ಕೆ, ಬೆರಳಚ್ಚು ವಿಭಾಗದ ಪಿಎಸ್ಐ ಪದ್ಮಾವತಿ, ಪೋಲಿಸ್ ಪೇದೆ ಮೌನೇಶ್ ಪಂಚಾಳ, ಸಂಗಮೇಶ, ಅಂಬರೀಶ್, ಮಂಜುನಾಥ ಸೇರಿ ಅನೇಕರಿದ್ದರು.
ಪೋಟೊ: ಕಾಳಗಿ ಪಟ್ಟಣದ ಪುರಾತನ ಬನಶಂಕರಿ ದೇವಿಯ ದೇವಸ್ಥಾನಕ್ಕೆ ಶಹಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಬೇಟಿ ನೀಡಿದರು.
ವರದಿ : ರಾಜೇಂದ್ರ ಪ್ರಸಾದ್