ಭಾರತೀಯ ಮತ್ತು ವಿದೇಶ ಪ್ರಜೆಗಳು ಪ್ರಯಾಣಿಸುತ್ತಿದ್ದ ವಿಮಾನವು ಅಹ್ಮದಾಬಾದಿನಲ್ಲಿ ಪತನವಾಗಿರುವ ಮಾಹಿತಿ ಕೇಳಿ ದುಃಖಿತನಗಿದ್ದೇನೆ. ಸಾವಿರಾರು ಕನಸುಗಳನ್ನು ಹೊತ್ತು ಸಾಗುತ್ತಿದ್ದ ದೊಡ್ಡವರು, ಮಕ್ಕಳು ಸೇರಿದಂತೆ ಒಟ್ಟು 240 ರಷ್ಟು ಪ್ರಯಾಣಿಕರು ನಿಮಿಷಗಳ ಅಂತರದಲ್ಲಿ ಸುಟ್ಟು ಕರಗಿ ಹೋಗುತ್ತಾರೆಂದರೆ ಸಹಿಸಲು ಹೇಗೆ ಸಾಧ್ಯವಾಗುತ್ತದೆ. ಪತನಗೊಂಡ ಸ್ಥಳದಲ್ಲಿದ್ದ ವಿದ್ಯಾರ್ಥಿಗಳು ಸಾವಿಗೀಡಾಗಿರುವುದು ವಿಷಾಧನೀಯವಾಗಿದೆ.
ವಿಮಾನದ ತಾಂತ್ರಿಕ ದೋಷವೇ ಕಾರಣವೆಂದು ಈಗಾಗಲೇ ಖಚಿತವಾಗಿದೆ. ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿ ಧೋರಣೆಯಿಂದ ದುರಂತವು ಸಂಭವಿಸಿದೆ. ನಿರ್ಲಕ್ಷ್ಮ ತೋರಿದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಕೆಲಸದಿಂದ ಅಮಾನತು ಮಾಡಬೇಕು. ಸಾವನ್ನಪ್ಪಿದವರಿಗೆ ಸರಕಾರಗಳು ಕೂಡಲೆ ನ್ಯಾಯವನ್ನು ದೊರಕಿಸಬೇಕು. ಪರಿಹಾರ ಘೋಷಿಸಿ ಪ್ರಕರಣದಿಂದ ಕೈ ತೊಳೆದು ಕೊಳ್ಳುವ ಚಾಳಿಯನ್ನು ಸರ್ಕಾರ ಬಿಟ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ಆಗ್ರಹಿಸಿದ್ದಾರೆ.