ಮಲ್ಲಿಕಾರ್ಜುನ ಪಾಲಾಮೂರ್ ಗೆ ಗೌರವ ಡಾಕ್ಟರೇಟ್

ವಾಸಿಂಗಟನ್ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವು ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಗೋವಾದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾಲಯದ ರಿಜಿಸ್ಟರ್ ಡಾ.ಸೆಬಸ್ಟಿನ್ ಮೆಂಡಸ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಶೈಕ್ಷಣಿಕ ಸಲಹೆಗಾರ ಡಾ.ರಾಧಿಮಾ ಪರಿರಾಗೆ ಪ್ರದಾನ ಮಾಡಿದರು.
ಉತ್ತಮ ಭಾಷಣಕಾರರು, ಬರಹಗಾರರು, ಉಪನ್ಯಾಸಕರು, ಸಂಘಟನೆ, ಸರಕಾರಿ ಸೇವೆ, ಸಾಮಾಜಿಕ – ಧಾರ್ಮಿಕ ಸೇವೆ ಈ ಎಲ್ಲವುಗಳನ್ನು ಏಕ ಕಾಲಕ್ಕೆ ಮೈಗೂಡಿಸಿಕೊಂಡವರು. ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ಅವರು ಈ ಎಲ್ಲಾ ಕ್ಷೇತ್ರಗಳಲ್ಲಿ, ಅಲ್ಲದೆ; ಇದರಾಚೆಯೂ ನಿರಂತರವಾಗಿ ಚಿಂಚೋಳಿ ತಾಲೂಕಿನಲ್ಲಿ ಕಳೆದ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ಕನ್ನಡದ ಚಟುವಟಿಕೆಗಳು ನಿರಂತರವಾಗಿ ಜರುಗಲು ಶಾಶ್ವತವಾದ ಕನ್ನಡ ಭವನ ಕಟ್ಟಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕ ಮಟ್ಟದ ಸಮ್ಮೇಳನಗಳನ್ನು ಮಾಡಿದ್ದಾರೆ. ಚಿಂಚೋಳಿಯ ಕೀರ್ತಿಯನ್ನು ರಾಜ್ಯಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಅವರ ವ್ಯಕ್ತಿತ್ವದ ಕಿರೀಟಕ್ಕೆ ಇದೀಗ ಗೋವಾ ರಾಜ್ಯದಲ್ಲಿ ನಡೆದ ಅಮೇರಿಕದ ವಾಷಿಂಗಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯ ಗರಿ ಮೂಡಿದೆ. ಇದು ಚಿಂಚೋಳಿ ತಾಲೂಕಿನ ಹೆಮ್ಮೆಯ ಹಾಗೂ ಅಭಿಮಾನದ ಸಂಗತಿಯಾಗಿದೆ. ಈ ಸಂದರ್ಭದಲ್ಲಿ ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇವೆ. ಅಲ್ಲದೆ ಅವರು ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿ ಇನ್ನೂ ಎತ್ತರ ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸುತ್ತೇವೆ ಎಂದು
ಶರಣು ಪಾಟೀಲ ಮೋತಕಪಳ್ಳಿ, ಗೌತಮ ಪಾಟೀಲ, ಬಸವಣ್ಣ ಪಾಟೀಲ, ಸುಭಾಶ ಸೀಳಿನ, ಶಾಮರಾವ ಕೊರವಿ, ನೀಲಕಂಠ ಸೀಳಿನ, ರವಿ ಹುಸೆಬಾವಿ, ಓಂಕಾರ ಮಠಪತಿ, ಅಬ್ದುಲ್ ಬಾಸಿದ್, ಬಸವರಾಜ ಐನೋಳಿ, ದೇವಿಂದ್ರಪ್ಪ ಹೋಳ್ಕರ್ ಸುರೇಶ ಕೊರವಿ, ಮಕ್ಸೂದ ಅಲಿ ಅಭಿನಂದಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!