ಸಾಲಬಾಧೆ ತಾಳದೆ ನೇಣಿಗೆ ಶರಣಾದ ರೈತ

ಅಫಜಲಪುರ ತಾಲೂಕಿನ ದಿಕ್ಸಂಗ (ಕೆ) ಗ್ರಾಮದ ರೈತ ಭೀರಣ್ಣ ತಂದೆ ಧರ್ಮಣ್ಣ ಪಾಟೀಲ್ (50 ), ಸಾಲಬಾಧೆ ತಳಲಾರದೆ ತನ್ನ ಮನೆಯಲ್ಲಿ ವಿಶೇಷ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಜರುಗಿದೆ ಮಾಶಾಳ ಗ್ರಾಮದ ಬ್ಯಾಂಕ್ ಆಗಿರಬಹುದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 4.71 ಲಕ್ಷ ರೂಪಾಯಿ ಸಾಲ ಪಡೆದ ರೈತ ಅಕ್ಕ ಪಕ್ಕದವರಿಂದ 6 ಲಕ್ಷ ರೂಪಾಯಿ ಮಾಹಿತಿಯನ್ನು ಲಭ್ಯವಾಗಿತ್ತು ಸಾಲಕ್ಕೆ ಹೆದರಿ ತನ್ನ ಮನೆಯಲ್ಲಿ ವಿಷ ಸೇವಿಸಿದ್ದಾನೆ ಕೂಡಲೇ ಸ್ಥಳೀಯ ಸಹಾಯದಿಂದ ಜಿಲ್ಲೆಯ ಶಾಂತಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ದೊರೆಯುವ ಮುನ್ನ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಮೃತ ರೈತನಿಗೆ ಪತ್ನಿ ಸಿದ್ದಮ್ಮ, ಮಕ್ಕಳಾದ ಭೂತಾಳಿ, ಸೀಲವಂತಿ , ಕನ್ಯಾಕುಮಾರಿ ಮಹೇಶ್ ಮಕ್ಕಳಿದ್ದು ಕುಟುಂಬದ ಮುಖ್ಯಸ್ಥರು ಸಾವಿನಿಂದ ಕಂಬನಿ ಮಿಡಿಯುತ್ತಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ವರದಿ :ಸೈಫನ್ ಮುಲ್ಲಾ ವರದಿಗಾರರು ಅಫಜಲಪುರ

error: Content is protected !!