ಮೀರಿಯಾಣ ಫರ್ಶಿ ಲಾರಿ ಉರುಳಿ ಅಪಘಾತ ಕಾರ್ಮಿಕರ ಸಾವು ನೋವಿಗೆ ಸರ್ಕಾರ ಮತ್ತು ಗಣಿ ಮಾಲೀಕ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತರೈತ ಸಂಘ ಪ್ರತಿಭಟನೆ

ಚಿಂಚೋಳಿ ತಾಲುಕಿನ ಮಿರಿಯಾಣ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ಕಾರ್ಮಿಕರ ಗಣಿಗಾರಿಕೆ ನಡೆಸುತ್ತಿದ್ದ ಮಾಲೀಕನ ಲಾರಿಹುರಳಿ ಬಿದ್ದು ಒಬ್ಬ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟು ಘಟನೆ ನಡೆದಿದ್ದು ಮತ್ತು ಇನ್ನುಳಿದ ಕಾರ್ಮಿಕರಿಗೆ ಕಾಲುಮುರಿದು ಕೈ ಮುರಿದು 5 ಜನರಿಗೆ ಮತ್ತು ಕಾರ್ಮಿಕರ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮೃತ ಕುಟುಂಬಕ್ಕೆ ಮತ್ತು ಕಾಲು ಕೈ ಮುರಿದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಹಾಗೂ ಗಣಿ ಮಾಲೀಕರು ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಪೀರ್ ಕಟಿ ಹತ್ತಿರ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಚನ್ನಬಸಪ್ಪ ಮನ್ಶೆಟ್ಟಿ ಜಿಲ್ಲಾಧ್ಯಕ್ಷರು ಕೆ ಪಿ ಆರ್ ಎಸ್, ಜಾಫರ್ ಖಾನ್ ಅಧ್ಯಕ್ಷರು ಕೆ ಪಿ ಆರ್ ಎಸ್ ಚಿಂಚೋಳಿ, ಪ್ರಭು ಪ್ಯಾರಾ ಕಾರ್ಯದರ್ಶಿ, ಭೀಮಲು, ದೇವರಾಜ್, ಜನಾರ್ಧನ್ ಶ್ರೀನಿವಾಸ್ ವಿಶ್ವನಾಥ್ ಶಾಂತಪ್ಪ ಲಾಲಪ್ಪ ಸೋಮಶೇಖರ್ ಇನ್ನು ಹಲವಾರು ಕೂಲಿ ಕಾರ್ಮಿಕರು ಜನರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್