ಬಿಜೆಪಿ ಪಕ್ಷದಿಂದ ಮನ್ನಾ ಏ ಖೇಳಿ ಮಂಡಲ ಮೊದಲ ಕಾರ್ಯಕಾರಣಿ ಸಭೆ

ಬೀದರ್ ಜಿಲ್ಲೆಯ ಮನ್ನಾಖೆಳಿ ಭಾರತಿ ಜನತಾ ಪಾರ್ಟಿ ಬೀದರ್ ದಕ್ಷಿಣ ಮಂಡಲ ನೂತನ ಅಧ್ಯಕ್ಷ ನೇಮಕ ಹಾಗೂ ಪ್ರಥಮ ಕಾರ್ಯ ಕಾರಣಿ ಸಭೆ ನಡೆಯಿತು

ನೂತನ ಅಧ್ಯಕ್ಷರಾಗಿ ದಕ್ಷಿಣ ಮಂಡಲ ಎಂ. ಗುರುನಾಥ ರಾಜಗಿರೆ ಅವರಿಗೆ ಮಾಡಲಾಯಿತು.

ನೂತನ ಸದಸ್ಯರು ಸೇರಿಸಲಾಯಿತು  ಹಾಗಾಗಿ ಹೊಸದಾಗಿ ಸೇರಿದ ಅವರಿಗೆ ಸನ್ಮಾನ ಮಾಡಲಾಯಿತು

ದಕ್ಷಿಣ ಶಾಸಕರು ಮತ್ತು ಬಿಜೆಪಿ ಪಕ್ಷದ ರಾಜ್ಯ ಕಾರ್ಯದರ್ಶಿ. ಶೈಲೇಂದ್ರ ಬೆಲ್ದಾಳೆ ಮಾತನಾಡುತ್ತಾ 2023/ ರಲ್ಲಿ ನಮ್ಮ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಒಟ್ಟು ಸದಸ್ಯರು ಐವತ್ತು ಸಾವಿರ ಇತ್ತು ಆದರೆ

ಈಗ ಮುಂದೆ ಕನಿಷ್ಠ ಒಬ್ಬ ಸದಸ್ಯರು ಎಷ್ಟು ಬೇಕು ಅಷ್ಟು ಸದಸ್ಯರು ಸೇರಿಸಬಹುದು.

ಕಾರಣ ಮೊದಲು ಒಂದು ಮೊಬೈಲ್‌ ಅಲ್ಲಿ ನಾಲ್ಕು ಮಾತ್ರ ಸದಸ್ಯರು ಸೇರಿಸಲು ಇತ್ತು.

ಮತ್ತು ಇದರ ಚಾಲನೆ ನಮ್ಮ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ನೇ ತಾರೀಖಿನಂದು ಚಾಲನೆ ನೀಡುತ್ತಾರೆ

ಆದರೆ ಈಗ ಸ್ಮಾರ್ಟ್ ಫೋನ್ ಇಲ್ಲ 2g ಫೋನ್ ಇದ್ದರೆ ಅವರಿಗೆ ಒ ಟಿ ಪಿ ಹೋಗುತ್ತದೆ ಅದನು ಅವರು ಹೇಳಿದರೆ ಸಾಕು ಸದಸ್ಯ ಆಗುತ್ತಾರೆ.

ನನಗೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ನಂಬಿಕೆ ಇದೆ.

ಈಗಿನ 50 ಸಾವಿರ ಸದಸ್ಯರು ಇದ್ದಾರೆ ಮುಂದಿನ ದಿನಗಳಲ್ಲಿ 1 ಲಕ್ಷ ಇಲ್ಲ 75 ಸಾವಿರ ಸದಸ್ಯರು ಹೊಂದುತ್ತೇವೆ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ಮಾಜಿ ಮಂಡಲ ಅಧ್ಯಕ್ಷ ರಾಜ ರೆಡ್ಡಿ. ಚಂದ್ರಯ್ಯ ಸ್ವಾಮಿ . ಸಾಯಿನಾಥ ಪಾಟೀಲ ಹೀಗೆ ದಕ್ಷಿಣ ಕ್ಷೇತ್ರದ ಒಟ್ಟು ಪದಾಧಿಕಾರಿಗಳು  ಕಾರ್ಯಕರ್ತರು ಹೆಣ್ಣು ಮಕ್ಕಳು ಗಂಡು ಮಕ್ಕಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮ ಮನ್ನಾ ಖೆಳಿ ಮಿನಕೆರಾ ಕ್ರಾಸ ವಿಜಯಲಕ್ಷ್ಮಿ ಫಂಕಷನ ಹಾಲನಲ್ಲಿ ಜರುಗಿತು.