ಶಾಸಕ ಹೆಚ್.ವೈ ಮೇಟಿಗೆ ವಿಜಯಪುರ ಕಾಂಗ್ರೆಸ್ ಶ್ರದ್ಧಾಂಜಲಿ

ಬಾಗಲಕೋಟ ಮತಕ್ಷೇತ್ರದ ಜನಪ್ರಿಯ ಶಾಸಕರು,ಮಾಜಿ ಸಚಿವರಾದ ಶ್ರೀ:ದಿ:ಹೆಚ್.ವೈ.ಮೇಟಿ ರವರು ಅಕಾಲಿಕ ನಿಧನರಾದ ಪ್ರಯುಕ್ತ ಇಂದು ದಿನಾಂಕ -04/11/2025 ರ ಸಾಯಂಕಾಲ-5-00 ಘಂಟೆಗೆ ವಿಜಯಪುರ ನಗರದ ಪಿಡಿಜೆ ಹೈಸ್ಕೂಲ್ ಹಿಂದೆ,ಖಾದಿ ಗ್ರಾಮೋದ್ಯೋಗ ವೃತ್ತದಲ್ಲಿ ಇರುವ ವಿಜಯಪುರ ನಗರದ ಕಾಂಗ್ರೆಸ್ ಮುಖಂಡರಾದ ಶ್ರೀ: ಅಬ್ದುಲ್ ಹಮೀದ್ ಮುಶ್ರೀಫ್ ರವರ ಕಾರ್ಯಾಲಯದಲ್ಲಿ ಭಾವಪೂರ್ಣ ಶೃದ್ಧಾಂಜಲಿ ಸಭೆ ಏರ್ಪಡಿಸಿ.ಮೃತರ ಆತ್ಮಕ್ಕೆ ಶಾಂತಿ ಕೋರಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ,ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೆಚ್.ವೈ.ಮೇಟಿ ಐದು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ಒಂದು ಬಾರಿ ಲೋಕಸಭೆ ಸದಸ್ಯರಾಗಿ ಜನಸೇವೆ ಮಾಡಿ ಜನಮಾನಸದಲ್ಲಿ ಸದಾಕಾಲ ಉಳಿಯುವ ಧೀಮಂತ ಶಕ್ತಿ ಇಂದು ನಾವು ಕಳೆದುಕೊಂಡಿದ್ದು.ನಮಗೆ ಹಾಗೂ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದೆ.ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದು ಅವರಿಗೆ ನಿಜವಾದ ಶೃಧ್ಧಾಂಜಲಿ ಸಲ್ಲಿಸಿದಂತಾಗುತ್ತದೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಶಕ್ತಿ ನೀಡಲಿ ಎಂದು ಹಾರೈಸಿದರು. ಈ ಸಭೆಯಲ್ಲಿ ವೈಜನಾಥ ಕರ್ಪೂರಮಠ, ಸೋಮನಾಥ ಕಳ್ಳಿಮನಿ, ಗಂಗಾಧರ ಸಂಬಣ್ಣಿ,ಹೊನಮಲ್ಲ ಸಾರವಾಡ,ಶಬ್ಬೀರ ಜಾಗೀರದಾರ,ಫಯಾಜ ಕಲಾದಗಿ,ಶಫೀಕ ಬಗದಾದಿ,ಪರಶುರಾಮ ಹೊಸಮನಿ,ಆರತಿ ಶಹಾಪೂರ,ಅಶ್ಪಾಕ ಮನಗೂಳಿ,ರೂಬಿನಾ ಹಳ್ಳೂರ,ಆಸಮಾ ಕಾಲೇಬಾಗ,ಭಾರತಿ ನಾವಿ,ಅವಿನಾಶ ಹೇರಲಗಿ,ಇಜಾಜ ಮುಕಬಿಲ,ವಸೀಮ ಹತ್ತರಕಿಹಾಳ,ಸಲೀಂ ಕಲಾದಗಿ,ಶಮೀಮ್ ಅಕ್ಕಲಕೋಟ,ಸವಿತಾ ಧನರಾಜ್,ಗೀರಿಶ ಇಟ್ಟಂಗಿ,ಹರೀಶ ಕವಲಗಿ,ವಿರೇಶ ಕಲಾಲ, ಪ್ರವೀಣ ಚೌರ,ಆನಂದ ಜಾಧವ್,ಸುಂದರಪಾಲ ರಾಠೋಡ,ಕಲ್ಲಪ್ಪಾ ಪಾರಶೆಟ್ಟಿ,ಅಶೋಕ ಭಜಂತ್ರಿ,ಅಶೋಕಗೌಡ ಮುಂತಾದವರು ಉಪಸ್ಥಿತರಿದ್ದರು.

ವರದಿ : ಅಜೀಜ ಪಠಾನ್.

error: Content is protected !!